ಹೀಗಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಬಜೆಟ್ ಭಾಷಣ ಆರಂಭಿಸುವ ಮುನ್ನವೇ ಸದನದಲ್ಲಿ ಬಿಜೆಪಿ ಗದ್ದಲ ಎಬ್ಬಿಸಲು ನಿರ್ಧರಿಸಿದೆ ಎನ್ನಲಾಗತ್ತಿದೆ. ಪ್ರತಿಸಲ ಮಂಡನೆಗೆ ಮುನ್ನವೇ ಬಜೆಟ್ ಪ್ರತಿ ಸಿಗುತ್ತಿತ್ತು, ಆದರೆ, ಈ ಬಾರಿ ಸಂಪೂರ್ಣ ಮಂಡನೆಯಾಗುವವರೆಗೂ ಸಿಎಂ ಬಜೆಟ್ ಪ್ರತಿ ನೀಡುವುದಿಲ್ಲ ಎಂದಿದ್ದಾರೆ. ಹೀಗಾಗಿ ಬಜೆಟ್ ಪ್ರತಿಗಳನ್ನು ಮುಂಚೆಯೇ ನೀಡುವೆ ಎಂದಿದ್ದ ಎಚ್ಡಿಕೆ ಈಗ ನಿರ್ಣಯ ಬದಲಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಬಿಜೆಪಿ ಪ್ರತಿಭಟಿಸಲು ಮುಂದಾಗಿದೆ.