ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಬಿಡ್ಡಿಂಗ್ ನಿಂದ ಹೊರಕ್ಕೆ

ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಗೆ ಷೇರು ಖರೀದಿಸದಿರಲು ಅದರ ಸ್ಥಾಪಕ ನರೇಶ್ ...
ಜೆಟ್ ಏರ್ ವೇಸ್ ಅಧ್ಯಕ್ಷ ನರೇಶ್ ಗೋಯಲ್
ಜೆಟ್ ಏರ್ ವೇಸ್ ಅಧ್ಯಕ್ಷ ನರೇಶ್ ಗೋಯಲ್
ಮುಂಬೈ: ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಗೆ ಷೇರು ಖರೀದಿಸದಿರಲು ಅದರ ಸ್ಥಾಪಕ ನರೇಶ್ ಗೋಯಲ್ ನಿರ್ಧರಿಸಿದ್ದಾರೆ.
ತೀವ್ರ ಸಾಲದ ಹೊರೆಯಲ್ಲಿರುವ ಜೆಟ್ ಏರ್ ವೇಸ್ ನಲ್ಲಿ ಸದ್ಯ 10ಕ್ಕಿಂತ ಕಡಿಮೆ ವಿಮಾನಗಳು ಹಾರಾಟ ನಡೆಸುತ್ತಿದ್ದು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಲ ನಿರ್ಣಯ ಯೋಜನೆಯಡಿ ಹೊಸ ಹಣವನ್ನು ಸಂಗ್ರಹಿಸಬೇಕಿದೆ.
ಕಳೆದ ಏಪ್ರಿಲ್ 12ರಂದು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಗೋಯಲ್ ಅವರ ಹೆಸರು ಕೂಡ ಕೇಳಿಬಂದಿತ್ತು.
ಸಾಲಪೀಡಿತ ಖಾಸಗಿ ವಿಮಾನ ಸಂಸ್ಥೆಯನ್ನು ಎಸ್ ಬಿಐ ನೇತೃತ್ವದ ಸಮೂಹದ ಪರವಾಗಿ ಮಾರಾಟ ಮಾಡುವುದು ಎಸ್ ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಕಡ್ಡಾಯ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com