ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆಯು ತನ್ನ ಸೆಂಟ್ರಲ್ ಬೋರ್ಡ್ ನ ನಿವೃತ್ತ ಉದ್ಯೋಗಿಗಳಿಗಾಗಿ, ಈ ಕೆಳಗಿನ ವಿಳಾಸದಲ್ಲಿ, ಆಗಸ್ಟ್ 23 ರಂದು, 10 AM ನಿಂದ 5.00 PM ವರಗೆ ಪಿಂಚಣಿ ಅದಾಲತ್ ನಡೆಸುತ್ತಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ
ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತರ ಕಚೇರಿ,
ವಲಯ ಕಚೇರಿ, ಬೆಂಗಳೂರು, ಕಾವೇರಿ, ಭವಿಷ್ಯನಿಧಿ ಎನ್ ಕ್ಲೇವ್,
ಹೆಚ್ಎಂಟಿ ಮುಖ್ಯ ರಸ್ತೆ, ಜಾಲಹಳ್ಳಿ, ಬೆಂಗಳೂರು-560013
ನೌಕರರ ಭವಿಷ್ಯ ನಿಧಿ ಸಂಸ್ಥೆ
ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ,
ನಂ.13. ರಾಜಾರಾಮ್ ಮೋಹನ್ ರಾಯ್ ರಸ್ತೆ, ಬೆಂಗಳೂರು-560025
ಇಪಿಎಫ್ಓ, ಸೆಂಟ್ರಲ್ ಬೋರ್ಡ್ ನ ಸಿಬ್ಬಂದಿ ಪಿಂಚಣಿದಾರರು ತಮ್ಮ ಬಾಕಿ ಉಳಿಕೆಯ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಕುಂದುಕೊರತೆಗಳನ್ನು ತಮಗೆ ಸಂಬಂಧಪಟ್ಟ ಪಿಂಚಣಿ ಪಾವತಿಸುವ ವಲಯ/ಪ್ರಾದೇಶಿಕ ಕಚೇರಿಗೆ 14-08-2019 ದಿನಾಂಕಕ್ಕೆ ಮುಂಚಿತವಾಗಿ ಕಳುಹಿಸಬೇಕು.
Advertisement