ಜೈಪುರ್:,ಕೃಷಿ ಉತ್ಪನ್ನಗಳಿಗೆ ಸಮಂಜಸವಾದ ಬೆಲೆಯನ್ನು ಒದಗಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ರಾಜಸ್ಥಾನ ಸರ್ಕಾರ 1,000 ಕೋಟಿ ರೂ. ರೈತರ ಕಲ್ಯಾಣ ನಿಧಿಯನ್ನು ಸ್ಥಾಪಿಸಿದೆ.
ಪ್ರಸ್ತುತ ರಾಜ್ಯ ಸರ್ಕಾರ ಒಂದು ವರ್ಷದ ಆಡಳಿತಾವಧಿ ಪೂರ್ಣಗೊಳಿಸಿದ ನಂತರ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಂಗಳವಾರ ಜೈಪುರ್ ನಲ್ಲಿ ನಡೆದ 'ಕಿಸಾನ್ ಸಮ್ಮೇಳನ್’ ನಲ್ಲಿ ಈ ನಿಧಿ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜಸ್ಥಾನ ಕೃಷಿ ಸಂಸ್ಕರಣೆ, ಕೃಷಿ ವ್ಯವಹಾರ ಮತ್ತು ಕೃಷಿ ರಫ್ತು ಉತ್ತೇಜನ ನೀತಿ -2019 ಕರಡನ್ನು ಬಿಡುಗಡೆ ಮಾಡಲಾಗಿದೆ.
ಕೃಷಿ ಸಂಸ್ಕರಣೆ ಮತ್ತು ಕೃಷಿ ರಫ್ತಿಗೆ ಉತ್ತೇಜನ ನೀಡುವುದರ ಜೊತೆಗೆ ರಾಜ್ಯದಲ್ಲಿ ರೈತರ ಆದಾಯವನ್ನು ಹೆಚ್ಚಿಸುವುದು ಈ ನೀತಿಯ ಉದ್ದೇಶವಾಗಿದೆ. ಈ ಮುನ್ನ ಗೆಹ್ಲೋಟ್ ತಾವು ಕಳೆದ ಜುಲೈನಲ್ಲಿ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಈ ಕಲ್ಯಾಣ ನಿಧಿಯನ್ನು ಘೋಷಿಸಿದ್ದರು.
Advertisement