ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಸಂಧಾನ ಸಮಿತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಒವೈಸಿ, ರವಿಶಂಕರ್ ಗುರೂಜಿ ಪಕ್ಷಪಾತಿಯಾಗಿದ್ದು, ಅವರಿಂದ ಸೌಹಾರ್ಧ ಮತ್ತು ನ್ಯಾಯಯುತ ಸಂಧಾನ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಲ್ಲದೆ 2018 ನವೆಂಬರ್ 4ರಂದು ರವಿಶಂಕರ್ ಗುರೂಜಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದ ಒವೈಸಿ, ಆಯೋಧ್ಯೆ ವಿವಾದ ಬಗೆಹರಿಯದಿದ್ದರೆ ಭಾರತ ಕೂಡ ಸಿರಿಯಾ ಆಗುತ್ತದೆ. ಮುಸ್ಲಿಮರು ತಮ್ಮ ವಾದ ಕೈಬಿಡದಿದ್ದರೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು ಎಂದು ಒವೈಸಿ ಕಿಡಿಕಾರಿದ್ದರು.