ಟಿಯುವಿ ರೈನ್‌ಲ್ಯಾಂಡ್ ಇಂಡಿಯಾ ಎಂಡಿ ಆಗಿ ಅರುಣ್ ದೇಶಪಾಂಡೆ ನೇಮಕ

ಟಿಯುವಿ ರೈನ್‌ಲ್ಯಾಂಡ್ ಕಂಪನಿಯು ಭಾರತದ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀ ಅರುಣ್ ದೇಶಪಾಂಡೆ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿದೆ.
ಟಿಯುವಿ ರೈನ್‌ಲ್ಯಾಂಡ್
ಟಿಯುವಿ ರೈನ್‌ಲ್ಯಾಂಡ್

ಬೆಂಗಳೂರು: ಸ್ವತಂತ್ರ ತಾಂತ್ರಿಕ ಸೇವೆಗಳಲ್ಲಿ ಜಾಗತಿಕ ಪ್ರಮುಖರಾದ ಟಿಯುವಿ ರೈನ್‌ಲ್ಯಾಂಡ್ ಕಂಪನಿಯು ಭಾರತದ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀ ಅರುಣ್ ದೇಶಪಾಂಡೆ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿದೆ. 

ಅವರ ಹೊಸ ಪಾತ್ರದ ಭಾಗವಾಗಿ, ಶ್ರೀ ದೇಶಪಾಂಡೆ ಅವರು ನಿರ್ವಹಣಾ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಯೋಜನಾ ಕಾರ್ಯಗತಗೊಳಿಸುವಿಕೆ, ನವೀನ ಪರಿಹಾರ, ವ್ಯವಹಾರ ಬೆಳವಣಿಗೆಯ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸುವುದು, ಕಂಪನಿಯ ಬೆಳವಣಿಗೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಣೆಯ ಮೇಲ್ವಿಚಾರಣೆಯನ್ನು ವಹಿಸಲಿದ್ದಾರೆ. 

ಟಿಯುವಿ ರೈನ್‌ಲ್ಯಾಂಡ್ ಗ್ರೂಪ್ ನಲ್ಲಿ ಹೊಸ ನಿಯೋಜನೆಯನ್ನು ವಹಿಸಿಕೊಳ್ಳುತ್ತಿರುವ ಶ್ರೀ ಥಾಮಸ್ ಫುಹ್ರ್ಮನ್ ಅವರ ಸ್ಥಾನವನ್ನು ಶ್ರೀ ದೇಶಪಾಂಡೆ ಅಲಂಕರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com