ತೆರಿಗೆದಾರರಿಗೆ ನೆಮ್ಮದಿಯ ಸುದ್ದಿ: 2019-20 ಹಣಕಾಸು ವರ್ಷದ ಐಟಿಆರ್ ಸಲ್ಲಿಕೆ ಅವಧಿ ಮೇ 31ರವರೆಗೆ ವಿಸ್ತರಣೆ

 2019-20ರ ಹಣಕಾಸು ವರ್ಷದ ಸಂಬಂಧಿಸಿ ವಿಳಂಬವಾಗಿ ಅಥವಾ ಪರಿಷ್ಕೃತ ರಿಟರ್ನ್ ಸಲ್ಲಿಸುವುದು ಸೇರಿದಂತೆ ವಿವಿಧ ಆದಾಯ ತೆರಿಗೆ ವಿಭಾಗದ ಕೆಲಸಗಳಿಗೆ ಸರ್ಕಾರವು ಮೇ 31 ರವರೆಗೆ ಸಮಯವನ್ನು ವಿಸ್ತರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2019-20ರ ಹಣಕಾಸು ವರ್ಷದ ಸಂಬಂಧಿಸಿ ವಿಳಂಬವಾಗಿ ಅಥವಾ ಪರಿಷ್ಕೃತ ರಿಟರ್ನ್ ಸಲ್ಲಿಸುವುದು ಸೇರಿದಂತೆ ವಿವಿಧ ಆದಾಯ ತೆರಿಗೆ ವಿಭಾಗದ ಕೆಲಸಗಳಿಗೆ ಸರ್ಕಾರವು ಮೇ 31 ರವರೆಗೆ ಸಮಯವನ್ನು ವಿಸ್ತರಿಸಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅವಶ್ಯಕತೆಗಳ ಮೇಲೆ ವಿನಾಯಿತಿ ಪಡೆಯಲು ವಿವಿಧ ಪಾಲುದಾರರಿಂದ ಪ್ರಾತಿನಿಧ್ಯಗಳನ್ನು ಸ್ವೀಕರಿಸಿದೆ ಎಂದು ಪ್ರಕಟಣೆ ಹೇಳಿದೆ.

"ತೀವ್ರವಾದ ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಪ್ರತಿಕೂಲ ಸನ್ನಿವೇಶಗಳ ದೃಷ್ಟಿಯಿಂದ ಮತ್ತು ದೇಶಾದ್ಯಂತದ ತೆರಿಗೆದಾರರು, ತೆರಿಗೆ ಸಲಹೆಗಾರರು ಮತ್ತು ಇತರ ಮಧ್ಯಸ್ಥಗಾರರಿಂದ ಬಂದಿರುವ ಹಲವು ವಿನಂತಿಗಳನ್ನು ಗಮನಿಸಿ ಸರ್ಕಾರ ಸಮಯಾವಕಾಶ ವಿಸ್ತರಿಸುವ ತೀರ್ಮಾನಕ್ಕೆ ಬಂದಿದೆ."ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಮೌಲ್ಯಮಾಪನ ವರ್ಷವಾಗಿರುವ  2020-21ಕ್ಕೆ ಉಪ-ಸೆಕ್ಷನ್ (4) ರ ಅಡಿಯಲ್ಲಿ ವಿಳಂಬಿತ ರಿಟರ್ನ್ ಮತ್ತು ಕಾಯಿದೆಯ ಸೆಕ್ಷನ್ 139 ರ ಉಪವಿಭಾಗ (5) ರ ಅಡಿಯಲ್ಲಿ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸುವವರು 2021 ರ ಮಾರ್ಚ್ 31 ರಂದು ಅಥವಾ ಅದಕ್ಕೆ ಮುನ್ನ ಸಲ್ಲಿಸಬೇಕಾಗಿತ್ತು ಆದರೆ ಇದನ್ನೀಗ  ಮೇ 31, 2021 ರಂದು ಅಥವಾ ಅದಕ್ಕೆ ಮೊದಲಿಗೆ ಸಲ್ಲಿಕೆ ಮಾಡಬಹುದು ಎಂದು ಸಿಬಿಡಿಟಿ ಹೇಳಿದೆ.

ಕಾಯ್ದೆಯ ಸೆಕ್ಷನ್ 148 ರ ಅಡಿಯಲ್ಲಿ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಆದಾಯ-ತೆರಿಗೆ ರಿಟರ್ನ್, ಇದಕ್ಕಾಗಿ ಈ ನೋಟಿಸ್ ಅಡಿಯಲ್ಲಿ ಆದಾಯವನ್ನು ಹಿಂದಿರುಗಿಸುವ ಕೊನೆಯ ದಿನಾಂಕ ಏಪ್ರಿಲ್ 1, 2021, ಅಥವಾ ಅದಕ್ಕೆ ನಂತರದ್ದಾಗಿದೆ. ಅದಲ್ಲದೆ ಮೇ 31, 2021, ಅಥವಾ ಆ ನೋಟಿಸ್ ಅಡಿಯಲ್ಲಿ ಅನುಮತಿಸಲಾದ ಸಮಯದೊಳಗೆ ಸಲ್ಲಿಕೆ ಮಾಡಲು ಅವಕಾಶವಿದೆ. ಅಲ್ಲದೆ, ವಿವಾದ ಪರಿಹಾರ ಸಮಿತಿ (ಡಿಆರ್‌ಪಿ) ಗೆ ಆಕ್ಷೇಪಣೆ ಸಲ್ಲಿಸಲು ಮತ್ತು ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲು ನಿಗದಿತ ದಿನಾಂಕವನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ.

2021 ರ ಮೇ 31 ರವರೆಗೆ ವಿವಿಧ ಕಾರ್ಯ ಕಲಾಪಗಳೀಗಾಗಿ ಗಿ ಸರ್ಕಾರ ಆದಾಯ ತೆರಿಗೆದಾರರಿಗೆ ವಿನಾಯಿತಿ ನೀಡಿದೆ ಎಂದು ನಂಗಿಯಾ ಆಂಡ್ ಕೋ ಎಲ್ ಎಲ್ ಪಿ ಪಾಲುದಾರ ಶೈಲೇಶ್ ಕುಮಾರ್ ಹೇಳಿದ್ದಾರೆ.

ಮಾರ್ಚ್ 31, 2021 ರಂದು ಮುಕ್ತಾಯಗೊಂಡ 2019-20ನೇ ಸಾಲಿನ ವಿಳಂಬಿತ / ಪರಿಷ್ಕೃತ ಐಟಿಆರ್ ಅನ್ನು ಸಲ್ಲಿಸುವ ಸಮಯವನ್ನು ಸಹ ಪರಿಷ್ಕರಿಸಲಾಗಿದೆ ಮತ್ತು ಈಗ ತೆರಿಗೆದಾರರು ತಮ್ಮ ಐಟಿಆರ್ ಗಳನ್ನು ಇ-ಫೈಲ್ ಮಾಡಲು ಅಥವಾ ಪರಿಷ್ಕರಿಸಲು 2021 ಮೇ 31 ರೊಳಗೆ ಸಾಧ್ಯವಾಗಲಿದೆ. "ಈ ಸಡಿಲಿಕೆಗಳು ತೆರಿಗೆದಾರರಿಗೆ ತೆರಿಗೆ ಸಂಬಂಧಿ ಕೆಲಸಗಳಲ್ಲಿ  ಹೆಚ್ಚು ಅಗತ್ಯವಾದ ಪರಿಹಾರವನ್ನು ನೀಡುತ್ತದೆ. ಆದಾಗ್ಯೂ, ಮುಂದಿನ 2 ವಾರಗಳಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸದಿದ್ದರೆ, ಸರ್ಕಾರವು ಈ ಸಮಯವನ್ನು ಇನ್ನಷ್ಟು ವಿಸ್ತರಿಸಬೇಕಾಗಬಹುದು" ಎಂದು ಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com