ನಿಖಿಲ್ ಗಾಗಿ ನೈಜ ಘಟನೆ ಆಧಾರಿತ ಕಥೆ ಸಿದ್ದಪಡಿಸುತ್ತಿದ್ದಾರೆ ನಿರ್ದೇಶಕ ಕೃಷ್ಣ!

ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ 4ನೇ ಸಿನಿಮಾ ಬಿಗ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ, ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಾಗಿ ಕಥೆ ಬರೆಯಲಾಗುತ್ತಿದೆ.
ನಿಖಿಲ್ ಕುಮಾರ್
ನಿಖಿಲ್ ಕುಮಾರ್

ಬೆಂಗಳೂರು:  ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ 4ನೇ ಸಿನಿಮಾ ಬಿಗ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ, ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಾಗಿ ಕಥೆ ಬರೆಯಲಾಗುತ್ತಿದೆ.

ನಿಖಿಲ್ ಗಾಗಿ  ಸಿದ್ದಪಡಿಸುತ್ತಿರುವ ಕಥೆ ನೈಜಕಥೆ ಆಧಾರಿತವಾಗಿದ್ದು, ಅದರ ಮೇಲೆ ಕಥೆ ಬರೆಯಲಾಗುತ್ತಿದೆ ಎಂದು ನಿರ್ದೇಶಕ ಕೃಷ್ಣ ತಿಳಿಸಿದ್ದಾರೆ, ಆದರೆ ಕಥೆಯ ಬಗ್ಗೆ ಹೆಚ್ಚಿನ ಸುಳಿವು ನೀಡಿಲ್ಲ, ಗಜಕೇಸರಿ, ಹೆಬ್ಬುಲಿ, ಮತ್ತು ಪೈಲ್ವಾನ್ ಗಿಂತ ಈ ಕಥೆ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.

ಇದು ಸಂಪೂರ್ಣವಾಗಿ ಹೊಸ ತರನಾದ ಕಥೆ, ನಿಖಿಲ್ ಗೂ ಕಥೆ ಇಷ್ಟವಾಗಿದೆ,  ಇದನ್ನು ವಿಶಿಷ್ಟವಾದ ರೀತಿಯಲ್ಲಿ ಹೇಳಲು ಹೊರಟಿದ್ದು ಹೆಚ್ಚು ಆಸಕ್ತಿ ಮೂಡಿಸಿದೆ, ಈ ಸಿನಿಮಾ ಕಥೆಗಾಗಿ ನಿಖಿಲ್ ಸಂಪೂರ್ಣ ಬದಲಾವಣೆಯಾಗುತ್ತಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ.

ಸಿನಿಮಾಗೆ ನಾಯಕ ಫೈನಲ್ ಆಗಿದ್ದು ಉಳಿದ ಪಾತ್ರಗಳಿಗಾಗಿ ಇನ್ನೂ ಆಯ್ಕೆ ನಡೆದಿಲ್ಲ, ಜೊತೆಗೆ ನಾಯಕಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com