ಒಡಿಶಾಕ್ಕೆ ಅಪ್ಪಳಿಸಿದ ಫೋನಿಚಂಡಮಾರುತ ನೂರಾರು ಜನರ ಬದುಕನ್ನು ನಾಶಪಡಿಸಿದೆ. ಫೋನಿ ಪೀಡಿತ ಒಡಿಶಾ ರಾಜ್ಯಕ್ಕೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ಬಿಡುಗಡೆ ಮಾಡಿದ್ದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಒಂದು ಕೋಟಿ ರೂ, ಪರಿಹಾರವನ್ನು ನೀಡಿದ್ದಾರೆ.
ಮುಂಬೈ: ಒಡಿಶಾಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ ನೂರಾರು ಜನರ ಬದುಕನ್ನು ನಾಶಪಡಿಸಿದೆ. ಫೋನಿ ಪೀಡಿತ ಒಡಿಶಾ ರಾಜ್ಯಕ್ಕೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ಬಿಡುಗಡೆ ಮಾಡಿದ್ದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಒಂದು ಕೋಟಿ ರೂ, ಪರಿಹಾರವನ್ನು ನೀಡಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪರಿಹಾರ ನಿಧಿಗೆ ಅಕ್ಷಯ್ ಕುಮಾರ್ ಈ ಹಣವನ್ನು ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.
ಇನ್ನು ನಟ ಅಕ್ಷಯ್ ಕುಮಾರ್ ಈ ಬಗೆಯಲ್ಲಿ ನೆರವು ನೀಡುತ್ತಿರುವುದು ಇದೇನೂ ಹೊಸದಲ್ಲ. ಹಿಂದೆ ಕೇರಳ, ಚೆನ್ನೈ ಪ್ರವಾಹಗಳಾದಾಗಲೂ ಅವರು ಆರ್ಥಿಕ ನೆರವು ನೀಡಿದ್ದರು.
ಅಲ್ಲದೆ ಭಾರತೀಯ ಸೈನಿಕರ ಕುಟುಂಬಕ್ಕೆ ನೆರವಾಗುವ ಸಲುವಾಗಿ ಕೇಂದ್ರ ಗೃಹಸಚಿವಾಲಯ ತೆರೆದಿರುವ ಭಾರತ್ ಕೆ ವೀರ್ ವೆಬ್ಸೈಟ್ ಮೂಲಕ ನೆರವಾಗುತ್ತಿದ್ದಾರೆ.
ಫೋನಿ ಚಂಡಮಾರುತದಿಂದಾಗಿ ಒಡಿಶಾದಲ್ಲಿ ಅಂದಾಜು 34 ಜನ ಸಾವನ್ನಪ್ಪಿದ್ದು ನೂರಾರು ಮಂಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕೋಟಿ ರು. ಆಸ್ತಿಪಾಸ್ತಿ ಹಾನಿಯಾಗಿದೆ.