ಬಾಲಿವುಡ್ ನಟಿ ರೀಚಾ ಚಡ್ಡಾಗೆ "ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ.
ಪ್ರಯೋಗಾತ್ಮಕ, ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟಿಗೆ ಮಹಾರಾಷ್ಟ್ರ ಸರ್ಕಾರ ಈ ಗೌರವ ನೀಡಿದೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಪ್ರಶಸ್ತಿ ಬಗ್ಗೆ ಮಾತನಾಡಿದ ನಟಿ "ಪ್ರಶಸ್ತಿ ನನ್ನ ಕನಸನ್ನು ಜೀವಂತವಾಗಿಸಿದೆ. ನನ್ನ ಪ್ರತಿಭೆ ಮೇಲೆ ವಿಶ್ವಾಸ ಮೂಡಿಸಿದೆ" ಎಂದರು.
ಇದಲ್ಲದೆ ಪ್ರಶಸ್ತಿ ಸ್ವೀಕರಿಸಿದ ನಂತರ ಪ್ರಶಸ್ತಿ ಹಾಗೂ ಅದನ್ನು ಸ್ವೀಕರಿಸುವಾಗ ಆದ ವಿಶೇಷ ಅನುಭವವನ್ನು ನಟಿ ರೀಚಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
Advertisement