ಮುಂಬೈ : ನಟಿ ಕಂಗನಾ ರನೌತ್ ಕಾನೂನನ್ನೂ ಮೀರಿದವರಲ್ಲ. ಒಂದು ವೇಳೆ ಅವರೇನಾದರೂ ತಾನು ಮಾದಕ ವ್ಯಸನಿ ಎಂದು ಹೇಳಿದ್ದರೆ ಎನ್ಸಿಬಿ ತನಿಖೆ ನಡೆಸಬೇಕು,’ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಂಗನಾ ಅವರು ನಾನು ಮಾದಕ ವ್ಯಸನಿ ಎಂದು ಹೇಳಿದರೆ ಎನ್ಸಿಬಿ ತನಿಖೆ ನಡೆಸಬೇಕು. ನಮ್ಮ ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ. ಕಂಗನಾ ವಿರುದ್ದವೂ ತನಿಖೆ ನಡೆಯಲಿ ಎಂದು ಹೇಳಿದರು.
ಕಂಗನಾ ರಣಾವತ್ ಡ್ರಗ್ಸ್ ಸೇವಿಸುತ್ತಾರೆ ಎಂದು ನಟ ಶೇಖರ್ ಸುಮನ್ ಅವರ ಪುತ್ರ ಅಧ್ಯಾಯನ್ ಸುಮನ್ ಆರೋಪಿಸಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮುಂಬೈ ಪೊಲೀಸರಿಗೆ ತಿಳಿಸಿದೆ.
Advertisement