ಕೋವಿಡ್-19 ಪೀಡಿತರಿಗಾಗಿ 1 ಕೋಟಿ ರೂ. ದೇಣಿಗೆ ಪ್ರಕಟಿಸಿದ ನಟ ಅಕ್ಷಯ್ ಕುಮಾರ್!

ಕೋವಿಡ್-19 ಪೀಡಿತರ ನೆರವಿಗಾಗಿ ದೆಹಲಿ ಮೂಲದ ಗೌತಮ್ ಗಂಭೀರ್ ಫೌಂಡೇಶನ್ ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ರೂ.ದೇಣಿಗೆಯನ್ನು ಪ್ರಕಟಿಸಿದ್ದಾರೆ.
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್

ನವದೆಹಲಿ: ಕೋವಿಡ್-19 ಪೀಡಿತರ ನೆರವಿಗಾಗಿ ದೆಹಲಿ ಮೂಲದ ಗೌತಮ್ ಗಂಭೀರ್ ಫೌಂಡೇಶನ್ ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ರೂ.ದೇಣಿಗೆಯನ್ನು ಪ್ರಕಟಿಸಿದ್ದಾರೆ.

ಇದಕ್ಕಾಗಿ ಅಕ್ಷಯ್ ಕುಮಾರ್ ಅವರಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿರುವ  ಗೌತಮ್ ಗಂಭೀರ್, ಈ ಕತ್ತಲೆಯಲ್ಲಿ ಪ್ರತಿಯೊಂದು ಸಹಾಯವು ಭರವಸೆಯ  ಕಿರಣವಾಗಿ ಮೂಡುತ್ತದೆ. ಕೊರೋನಾ ಪೀಡಿತರಿಗೆ ಆಹಾರ, ಹಾಸಿಗೆ, ಆಕ್ಸಿಜನ್ ಮತ್ತಿತರ
ಅಗತ್ಯ ಸೌಲಭ್ಯ ಕಲ್ಪಿಸಲು ಗೌತಮ್ ಗಂಭೀರ್ ಫೌಂಡೇಶನ್ ಗೆ 1 ಕೋಟಿ ನೀಡಿದ್ದಕ್ಕಾಗಿ ಅಕ್ಷಯ್ ಕುಮಾರ್ ಗೆ ಧನ್ಯವಾದ, ದೇವರು ಒಳ್ಳೆಯದು ಮಾಡಲಿ ಎಂದು   ಗಂಭೀರ್ ಬರೆದುಕೊಂಡಿದ್ದಾರೆ.

ಗೌತಮ್ ಗಂಭೀರ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್,  ಒಳ್ಳೆಯ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ. ಇದು ನಿಜವಾಗಿಯೂ ಕಠಿಣ ಸಂದರ್ಭವಾಗಿದೆ .ಗೌತಮ್ ಗಂಭೀರ್, ನಾನು ಸಹಾಯ ಮಾಡಿದ್ದಕ್ಕೆ ಸಂತೋಷವಾಗಿದೆ. ನಾವೆಲ್ಲರೂ ಶೀಘ್ರದಲ್ಲೇ ಈ ಬಿಕ್ಕಟ್ಟಿನಿಂದ ಹೊರಬರಲು ಹಾರೈಸುತ್ತೇನೆ ಸುರಕ್ಷಿತವಾಗಿರಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com