ತೌಕ್ಟೇ ಚಂಡಮಾರುತದ ವೇಳೆ ಫೋಟೋಶೂಟ್ ಮಾಡಿಸಿಕೊಂಡ ನಟಿ ವಿರುದ್ಧ ತಿರುಗಿಬಿದ್ದ ನೆಟ್ಟಿಗರು!

ತೌಕ್ಟೇ ಚಂಡಮಾರುತದ ಹೊಡೆತಕ್ಕೆ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದೆ. ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ನಟಿಯೊಬ್ಬರು ತಮ್ಮ ಮನೆ ಮುಂದೆ ಮುರಿದುಬಿದ್ದಿದ್ದ ಮರದ ಮೇಲೆ ಕುಳಿತು ಫೋಟೋಶೂಟ್ ಮಾಡಿಸಿಕೊಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ದೀಪಿಕಾ ಸಿಂಗ್
ದೀಪಿಕಾ ಸಿಂಗ್

ಮುಂಬೈ: ತೌಕ್ಟೇ ಚಂಡಮಾರುತದ ಹೊಡೆತಕ್ಕೆ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದೆ. ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ನಟಿಯೊಬ್ಬರು ತಮ್ಮ ಮನೆ ಮುಂದೆ ಮುರಿದುಬಿದ್ದಿದ್ದ ಮರದ ಮೇಲೆ ಕುಳಿತು ಫೋಟೋಶೂಟ್ ಮಾಡಿಸಿಕೊಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 

ಮುಂಬೈನಲ್ಲಿ ಗಂಟೆಗೆ 114 ಕಿ.ಮೀ ವೇಗದಲ್ಲಿ ತೌಕ್ಟೇ ಚಂಡಮಾರುತ ಬೀಸಿತ್ತು. ಹೀಗಿರುವಾಗಲೇ ಕಿರುತೆರೆ ನಟಿ ದೀಪಿಕಾ ಸಿಂಗ್ ಚಂಡಮಾರುತ ನಿಲ್ಲಲಿ ಎಂದು ಕಾಯುವ ಬದಲು ಇರುವ ಪ್ರಕೃತಿಯನ್ನು ಹಾಗೂ ಮಳೆಯನ್ನು ಅಪ್ಪಿಕೊಳ್ಳಿ. ಅದೇ ಜೀವನ ಎಂದು ಶೀರ್ಷಿಕೆ ನೀಡಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೇ 17ರಂದು ಹಂಚಿಕೊಂಡಿದ್ದರು. 

ಅಲ್ಲದೆ ಮಳೆಯಲ್ಲಿ ಡ್ಯಾನ್ಸ್ ಮಾಡುತ್ತಾ ವಿಡಿಯೋ ಮಾಡಿರುವ ದೀಪಿಕಾ ಪ್ರಕೃತಿಯನ್ನು ಸ್ವೀಕರಿಸಿ ಎಂದು ಶೀರ್ಷಿಕೆ ನೀಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಸಿಂಗ್ ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಚಂಡಮಾರುತದ ರಭಸಕ್ಕೆ ದೀಪಿಕಾ ಅವರ ಮನೆ ಮುಂದೆ ಇದ್ದ ಮರವೊಂದು ನೆಲಕ್ಕೆ ಉರುಳಿ ಬಿದ್ದಿದೆ. ಆ ಮರದ ಮುಂದೆ ನಿಂತು ನಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com