ವಿಸ್ಮಯ ಚಿತ್ರ ನಿರ್ದೇಶಕ ಅರುಣ್ ವೈದ್ಯನಾಥನ್ ಶೃತಿ ಮಾಡಿರುವ ಆರೋಪದ ಕುರಿತಂತೆ ತಮ್ಮ ಹೇಳಿಕೆಯನ್ನು ಕೊಟ್ಟಿದ್ದಾರೆ. ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಇಬ್ಬರು ಒಳ್ಳೆಯ ನಟ, ನಟಿಯರು. ಅರ್ಜುನ್ ಸರ್ಜಾ ಚಿತ್ರದ ಕೆಲವು ಸೀನ್ ಗಳಿಗೆ ಕತ್ತರಿ ಹಾಕುವಂತೆ ಹೇಳಿದ್ದರು. ಚಿತ್ರದಲ್ಲಿ ಇನ್ನೂ ಎರಡು ಬೆಡ್ ರೂಂ ಸೀನ್ ಗಳಿತ್ತು. ಅವುಗಳಿಗೆ ಕತ್ತರಿ ಹಾಕುವಂತೆ ಅರ್ಜುನ್ ಸರ್ಜಾ ಹೇಳಿದ್ದರು. ಅಲ್ಲದೇ ಸ್ಕ್ರಿಪ್ಟ್ ಸಂದರ್ಭದಲ್ಲೇ ಅವುಗಳನ್ನು ತೆಗೆಯುವಂತೆ ಹೇಳಿದ್ದರು ಹೇಳಿದ್ದಾರೆ.