ಈ ಚಿತ್ರಕ್ಕೆ ಖ್ಯಾತ ಉದ್ಯಮಿ ಬಿಆರ್ ಶೆಟ್ಟಿ ನಿರ್ಮಾಣದ ಹೊಣೆ ಹೊರುವ ಮೂಲಕ ಚಿತ್ರಕ್ಕೆ ಕನ್ನಡದ ನಂಟು ಬೆಸೆದುಕೊಂಡಿತು. ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ಈ ಚಿತ್ರವನ್ನುತೆರೆಗೆ ತರುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಈ ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಚಾರ್ ನಟ ಮೋಹನ್ಲಾಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದು, ಶ್ರೀಕುಮಾರ್ ಮೆನನ್ ಈ ಚಿತ್ರದ ನಿರ್ದೇಶನ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತ ವಾಸುದೇವ ನಾಯರ್ ಅವರ 'ರಂಡಮೂಲ' ಎಂಬ ಕಾದಂಬರಿ ಆಧಾರಿಸಿ, ಈ ಸಿನಿಮಾ ಮಾಡಲು ನಿರ್ಧರಿಸಲಾಗಿತ್ತು.