ನಾನು ತೆರೆ ಮೇಲೆ ಬಂದು ನಾಲ್ಕು ವರ್ಷಗಳೇ ಕಳೆದಿವೆ. ಇದು ನನ್ನ ಸೆಕೆಂಡ್ ಇನ್ನಿಂಗ್ಸ್. ಒಂದು ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆ ಮಾಡುವ ಹೊತ್ತಿಗೆ ಹೈರಾಣಾಗಿ ಬಿಡುತ್ತಾರೆ. ಆದರೆ ನಾವು ಕೆಂಪೇಗೌಡ-2 ಚಿತ್ರ ಮಾಡಿ ಮುಗಿಸಿದ್ದೇವೆ. ಆದರೆ ಇದುವರೆಗೂ ಸುಸ್ತು ಅನ್ನುವುದೇ ಆಗಿಲ್ಲ. ಸಾಕಷ್ಟು ಜನ ಯಾಕೆ ಲೇಟಾಯಿತು ಎಂದು ಕೇಳಿದ್ದರು. ಅದಕ್ಕೆ ನಾನು ಕೊಡುವ ಉತ್ತರ ಸಾಕಷ್ಟು ಜನ ಧರ್ಮಸ್ಥಳಕ್ಕೆ ಕಾರಿನಲ್ಲಿ ಬಸ್ಸಿನಲ್ಲಿ ಹೋಗುತ್ತಾರೆ, ನಾವು ಪಾದಯಾತ್ರೆಯಲ್ಲಿ ಹೋಗಿದ್ದೇವೆ. ಹಾಗಾಗಿ ತಡವಾಗಿದೆ.