ಒಂದು ಕಾಲಘಟ್ಟದಲ್ಲಿ "ಕೆಂಡಸಂಪಿಗೆ" ಚಿತ್ರದ ಮುಂದಿನ ಬಾಗ "ಕಾಗೆ ಬಂಗಾರ"ವನ್ನು ಕೈಬಿಡಲು ಸೂರಿ ತೀರ್ಮಾನಿಸಿದ್ದರು. ಆದರೆ ಪ್ರೇಕ್ಷಕರ ಒತ್ತಾಯದಿಂದಾಗಿ ಮತ್ತೆ ಆ ಕೆಲಸವನ್ನು ಕೈಗೆ ತೆಗೆದುಕೊಂಡಿದ್ದಾರೆ."ನನ್ನ ಎಲ್ಲಾ ಚಿತ್ರಗ್ಳೂ ಎರಡನೇ ಭಾಗವನ್ನು ತಯಾರಿಸಬಹುದಾದ ಸಾಕಷ್ಟು ವಿಷಯಗಳನ್ನು ಹೊಂದಿದೆ.ಜನರು ಕೆಂಡಸಂಪಿಗೆಯನ್ನು ಮೆಚ್ಚಿದ್ದಾರೆ, ಕಾಗೆ ಬಂಗಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇದೀಗ ಅದುವೇ ನನ್ನ ಮುಂದಿನ ಯೋಜನೆಯಾಗಿದೆ.ಇದಕ್ಕಾಗಿ ಚಿತ್ರಕಥೆ ಸಿದ್ದವಿದ್ದು ಅಂತಿಮ ಕ್ಷಣದ ತಯಾರಿ ನಡೆಯಬೇಕಿದೆ., ಸೂರಿ ಪಾಪ್ ಕಾರ್ನ್.... ಚಿತ್ರದ 50 ಶೇ. ಚಿತ್ರೀಕರಣ ಮುಗಿದಿದೆ"