ಶ್ರೀಲಂಕಾ ಬಾಂಬ್ ಸ್ಪೋಟ: ಗೆಳೆಯರನ್ನು ನೆನೆದು ಭಾವುಕರಾದ ಗೋಲ್ಡನ್ ಸ್ಟಾರ್
ಶ್ರೀಲಂಕಾದಲ್ಲಿ ನಡೆದ ಭೀಕರ ಬಾಂಬ್ ಸ್ಪೋಟದಲ್ಲಿ ಕರ್ನಾಟಕದ 7 ಜನ ಸಾವಿಗೀಡಾಗಿದ್ದಾರೆ. ಅದರಲ್ಲಿ ಖ್ಯಾತ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗನೇಶ್ ಸ್ನೇಹಿತರೂ ಸೇರಿದ್ದು ನಟ ಗಣೇಶ್ ತಮ್ಮ ಸ್ನೇಹಿತನ ಅಗಲಿಕೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ಬಾಂಬ್ ಸ್ಪೋಟ: ಗೆಳೆಯರನ್ನು ನೆನೆದು ಭಾವುಕರಾದ ಗೋಲ್ಡನ್ ಸ್ಟಾರ್
ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಭೀಕರ ಬಾಂಬ್ ಸ್ಪೋಟದಲ್ಲಿ ಕರ್ನಾಟಕದ 7 ಜನ ಸಾವಿಗೀಡಾಗಿದ್ದಾರೆ. ಅದರಲ್ಲಿ ಖ್ಯಾತ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗನೇಶ್ ಸ್ನೇಹಿತರೂ ಸೇರಿದ್ದು ನಟ ಗಣೇಶ್ ತಮ್ಮ ಸ್ನೇಹಿತನ ಅಗಲಿಕೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವೀಟ್ ಮೂಲಕ ಭಾವುಕ ಮಾತುಗಳನ್ನು ಹೇಳಿರುವ ನಟ ಗೆಳೆಯನೊಡನಿರುವ ಹಳೆಯ ಫೋಟೋ ಸಹ ಹಂಚಿಕೊಂಡಿದ್ದಾರೆ. ಪುಟ್ಟರಾಜು, ಎನ್ ಮಾರೇಗೌಡ (ಅಪ್ಪಿ ಎಂಬ ಇಬ್ಬರು ಗೆಳೆಯರನ್ನು ಗಣೇಶ್ ಈ ದುರಂತದಲ್ಲಿ ಕಳೆದುಕೊಂಡಿದ್ದಾರೆ.
"ನೀವಿಲ್ಲದ್ದನ್ನು ನಂಬಲೇ ಆಗುತ್ತಿಲ್ಲ, ನೋವನ್ನು ಹಂಚಿಕೊಳ್ಲಲು ಪದಗಳಿಲ್ಲ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಶ್ರೀಲಂಕಾದ ಉಗ್ರ ದಾಳಿಯನ್ನು ನಾನು ಖಂಡಿಸುತ್ತೇನೆ" ಗಣೇಶ್ ಬರೆದುಕೊಂಡಿದ್ದಾರೆ.
Can’t believe u r no more with us,No words to express the sorrow,Puttaraju n Maregowda(Appi) my dear friend vll miss you. My deepest sympathies who lost their loved ones in this barbaric terror attack #SriLankaTerrorAttack#SriLankaBlasts I condemn Srilanka attack RIP pic.twitter.com/Uw8WjbE5EP