ಆದರೆ ಹೊಸ ವಾತಾವರಣಕ್ಕೆ ಮನುಷ್ಯ ಪ್ರಯಾಣ ಬೆಳೆಸಿದಾಗ ಆತನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಪ್ರತಿ ನಿಮಿಷವೂ ಆತನಲ್ಲಿ ಹೊಸ ಹೊಸ ಅನುಭವಗಳಾಗುತ್ತದೆ. ಅಂತಹ ಸೂಕ್ಷ್ಮ ಎಳೆಯನ್ನಿಟ್ಟುಕೊಂಡು ಶಾರ್ದೂಲ ಸಿನಿಮಾವನ್ನು ತಯಾರಿಸಲಾಗಿದೆಯಂತೆ. ಈ ಚಿತ್ರಕ್ಕೆ ರವಿತೇಜಾ ಮತ್ತು ಚೇತನ್ ಚಂದ್ರ ನಾಯಕರಾಗಿದ್ದು, ಐಶ್ವರ್ಯಾ ಮತ್ತು ಕೃತಿಕಾ ರವೀಂದ್ರ ಅವರಿಗೆ ಜತೆಯಾಗಿದ್ದಾರೆ.