ಒಳ್ಳೆಯ ಚಿತ್ರ ಕೊಟ್ಟರೆ ಪ್ರೇಕ್ಷಕರಿಗೆ ಮಳೆ-ಬಿಸಿಲು ಯಾವುದು ಲೆಕ್ಕವಿಲ್ಲ: ದರ್ಶನ್

ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ...
ದರ್ಶನ್
ದರ್ಶನ್

ಬೆಂಗಳೂರು: ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. 

ಭಾನುವಾರ ಚಿತ್ರದ ಸೆಲೆಬ್ರೆಟಿ ಶೋ ಆಯೋಜಿಸಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರು. ಹಿರಿಯ ನಟಿಯರಾದ ಜಯಂತಿ, ಗಿರಿಜಾ ಲೋಕೇಶ್‌, ವಿನಯಾ ಪ್ರಸಾದ್‌, ಹಿರಿಯ ನಿರ್ದೇಶಕರಾದ ರಾಜೇಂದ್ರ ಸಿಂಗ್‌ ಬಾಬು, ಟಿ.ಎಸ್‌. ನಾಗಾಭರಣ ಸೇರಿದಂತೆ ಅನೇಕರು ಚಿತ್ರ ವೀಕ್ಷಿಸಿದರು

ಈ ಹಿಂದೆ ಬಂದ ಮಹಾಭಾರತ ಸಂಬಂಧಿತ ಪೌರಾಣಿಕ ಸಿನಿಮಾಗಳ ಭಾಗವಾಗಿದ್ದ ಕೆಲವು ಕಲಾವಿದರು ಸಿನಿಮಾ ವೀಕ್ಷಿಸಿರುವುದು ನನ್ನ ಅದೃಷ್ಟ, ನನ್ನ ಪಾಲಿಗೆ ಅವರೇ ಉತ್ತಮ ವಿಮರ್ಶಕರು ಎಂದು ನಟ ದರ್ಶನ್ ಹೇಳಿದ್ದಾರೆ.

ಹಿರಿಯ ನಟಿಯರಾದ ಜಯಂತಿ ಅಮ್ಮ ವ್ಹೀಲ್ ಚೇರ್ ನಲ್ಲಿ ಬಂದು ಸಿನಿಮಾ ನೋಡಿದ್ದಾರೆ., ನನೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ, ಹೃದಯ ತುಂಬಿ ಬರುತ್ತಿದೆ ಎಂದು ದರ್ಶನ್ ಶ್ಲಾಘಿಸಿದ್ದಾರೆ,

ಇಂತ ಸಿನಿಮಾ ಮಾಡಲು ಮುನಿರತ್ನ ಅವರಂಥ ನಿರ್ಮಾಪಕರಿಂದ ಮಾತ್ರ ಸಾಧ್ಯ,  ಮುನಿರತ್ನ ಅವರಿಗೆ ಮಾತ್ರ ಈ ತಾಕತ್ತು ಇರುವುದು,  ಏಕೆಂದರೇ ಅವರು ಸಮುದ್ರದ ಅಲೆಯ ವಿರುದ್ಧ ಈಜಿದ್ದಾರೆ,  ಈ ರೀತಿಯ ಸಂಭ್ರಮ ನನ್ನ ಜೀವನದಲ್ಲಿ ಎರಡನೇ ಬಾರಿಗೆ ಬಂದಿದೆ,

ಹಲವು ವರ್ಷಗಳ ಹಿಂದೆ ನಾನು ಸಂಗೊಳ್ಳಿ ರಾಯಣ್ಣ ಪೌರಾಣಿಕ ಸಿನಿಮಾದಲ್ಲಿ ನಾನು ನಟಿಸಿದ್ದೆ, ಇನ್ನೂ ಉತ್ತರ ಕರ್ನಾಟಕ ಜನತೆಗೆ ದರ್ಶನ್ ಅಭಿನಂದನೆ ಸಲ್ಲಿಸಿದ್ದಾರೆ,. ಅಷ್ಟೊಂದು ಪ್ರವಾಹದಲ್ಲಿ ಸಿಲುಕಿದ್ದರೂ ಸಿನಿಮಾ ವೀಕ್ಷಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿರುವ ದರ್ಶನ್, ಒಳ್ಳೆಯ ಚಿತ್ರ ಕೊಟ್ಟರೇ ಪ್ರೇಕ್ಷಕರು ಮಳೆ, ಬಿಸಿಲು ಯಾವುದನ್ನು ಲೆಕ್ಕಿಸುವುದಿಲ್ಲ ಎಂದು ಹೊಗಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com