ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಜಯ್ ಪ್ರಸಾದ್ ನಿರ್ದೇಶನದ ಪರಿಮಳ ಲಾಡ್ಜ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಸತೀಶ್ ನೀನಾಸಂ ಮತ್ತು ಲೂಸ್ ಮಾದ ಯೋಗಿ ಅವರು ಸಲಿಂಗಕಾಮಿಗಳು ಅಂತಾ ಹೇಳಿ ಅಚ್ಚರಿ ಮೂಡಿಸಿದರು.
ಇದಕ್ಕೆ ಕಾರಣವೂ ಇದೆ. ನಿರ್ದೇಶಕ ವಿಜಯ್ ಪ್ರಸಾದ್ ಅವರು ಸತೀಶ್ ನೀನಾಸಂ ಮತ್ತು ಲೂಸ್ ಮಾದ ಯೋಗಿರನ್ನು ಚಿತ್ರದಲ್ಲಿ ಸಲಿಂಗಕಾಮಿಗಳು ಅಂತ ತೋರಿಸಿದ್ದಾರೆ. ಇದನ್ನೇ ಹೇಳಿ ದರ್ಶನ್ ಕಾರ್ಯಕ್ರಮದಲ್ಲಿ ಅವರ ಕಾಲೆಳೆದಿದ್ದಾರೆ.
ಪರಿಮಳ ಲಾಡ್ಜ್ ಚಿತ್ರದ ಬಗ್ಗೆ ದರ್ಶನ್ ಮೆಚ್ಚುಗೆಯ ಮಾತುಗಳನ್ನು ಆಡಿದರು. ಚಿತ್ರಕ್ಕೆ ಒಳ್ಳೆಯದಾಗಲಿ. ನಿರ್ದೇಶಕರು ವಿಭಿನ್ನ ರೀತಿಯ ಚಿತ್ರಗಳನ್ನು ಮಾಡಿ ಒಳ್ಳೆಯ ಸಂದೇಶವನ್ನು ನೀಡುತ್ತಾರೆ. ನೀವು ಅದೇ ರೀತಿ ಅಭಿರುಚಿಯ ಸಿನಿಮಾಗಳನ್ನು ಮಾಡಿ ಎಂದು ಹೇಳಿದರು.
ನಂತರ ಮಾಡನಾಡಿದ ಸತೀಶ್ ನೀನಾಸಂ ಅವರು ನಿರ್ದೇಶಕರು ನಮ್ಮನ್ನು ಸಲಿಂಗಕಾಮಿಗಳು ಎಂದು ತೋರಿಸಿದ್ದಾರೆ. ಅದು ಯಾಕೆ ಅಂತಾ ಚಿತ್ರವನ್ನು ನೋಡಿದಾಗಲೇ ಗೊತ್ತಾಗುತ್ತದೆ ಎಂದರು.
ವಿಡಿಯೋ ಕೃಪೆ: ಕೆಎಫ್ಐ
Advertisement