ಹೈದರಾಬಾದ್: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯಾಚಾರ ಪ್ರಕರಣದ ಎಲ್ಲಾ ಆರೋಪಿಗಳೂ ಎನ್'ಕೌಂಟರ್ ನಲ್ಲಿ ಹತ್ಯೆಯಾಗಿರುವುದಕ್ಕೆ ಟಾಲಿವುಡ್ ಹರ್ಷ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿರುವ ಟಾಲಿವುಡ್'ನ ನಟ ಹಾಗೂ ನಟಿಯರು ಅತ್ಯಾಚಾರಿಗಳ ಬೇಟೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಜ್ಯೂನಿಯರ್ ಎನ್'ಟಿಆರ್, ನ್ಯಾಯಾ ದೊರಕಿತು. ನೌ ರೆಸ್ಟ್ ಇನ್ ಪೀಸ್ ದಿಶಾ ಎಂದು ಹೇಳಿದ್ದಾರೆ.
ಇದರಂತೆ ಅಲ್ಲು ಅರ್ಜುನ್ ಕೂಡ ಟ್ವೀಟ್ ಮಾಡಿದ್ದು, ನ್ಯಾಯ ದೊರಕಿದು ಎಂದು ತಿಳಿಸಿದ್ದಾರೆ.
ನಟಿ ಅನಸೂಯಾ ಭಾರದ್ವಾಜ್ ಟ್ವೀಟ್ ಮಾಡಿ, ತೆಲಂಗಾಣ ಪೊಲೀಸರ ಕುರಿತು ಹೆಮ್ಮೆಯಾಗುತ್ತಿದೆ. ತೆಲಂಗಾಣ ಪೊಲೀಸರು ಉದಾಹರಣೆಯಾಗಿದ್ದಾರೆ. ಅತ್ಯಾಚಾರಿಗಳಿಗೆ ಸಿಕ್ಕ ಶಿಕ್ಷೆಗೆ ಸಂತೋಷವಾಗಿದೆ ಎಂದಿದ್ದಾರೆ.
ಸುದ್ದಿಯೊಂದಿಗೆ ಇಂದು ಬೆಳಿಗ್ಗೆ ನಾನು ಎಚ್ಚರಗೊಂಡಿದೆ. ನ್ಯಾಯ ದೊರಕಿತು ಎಂದು ನಟ ನಾಗಾರ್ಜುನ ಅವರು ಟ್ವೀಟ್ ಮಾಡಿದ್ದಾರೆ.
ನಟಿ ರಾಕುಲ್ ಪ್ರೀತ್ ಟ್ವೀಟ್ ಮಾಡಿ. ಅತ್ಯಾಚಾರದಂತಹ ಅಪರಾಧವೆಸಗಿ ಎಷ್ಟು ದೂರ ತಾನೆ ಓಡಲು ಸಾಧ್ಯ? ತೆಲಂಗಾಣ ಪೊಲೀಸರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ನಟಿ ಹನ್ಸಿಕಾ ಮೋಟ್ವಾಣಿ ಟ್ವೀಟ್ ಮಾಡಿ, ನ್ಯಾಯ ದೊರಕಿದು ಎಂದಿದ್ದಾರೆ.
Advertisement