ಯಾಕೆ ಇಷ್ಟು ಅವಸರ, ನಿಧಾನಕ್ಕೆ ಬೈಕ್ ಓಡಿಸಿ: ಸವಾರರಿಗೆ ಕಿಚ್ಚ ಸುದೀಪ್ ಹೇಳಿದಿಷ್ಟು!

ವೇಗವಾಗಿ ಬೈಕ್ ಓಡಿಸುತ್ತಿದ್ದ ಸವಾರರಿಗೆ ನಟ ಕಿಚ್ಚ ಸುದೀಪ್ ಯಾಕೆ ಇಷ್ಟು ಅವಸರ, ನಿಧಾನಕ್ಕೆ ಬೈಕ್ ಓಡಿಸಿ ಎಂದು ಸಲಹೆ ನೀಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಿಚ್ಚ ಸುದೀಪ್
ಕಿಚ್ಚ ಸುದೀಪ್

ಬೆಂಗಳೂರು: ವೇಗವಾಗಿ ಬೈಕ್ ಓಡಿಸುತ್ತಿದ್ದ ಸವಾರರಿಗೆ ನಟ ಕಿಚ್ಚ ಸುದೀಪ್ ಯಾಕೆ ಇಷ್ಟು ಅವಸರ, ನಿಧಾನಕ್ಕೆ ಬೈಕ್ ಓಡಿಸಿ ಎಂದು ಸಲಹೆ ನೀಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸುದೀಪ್ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಕೆಲ ಯುವಕರು ಬೈಕ್ ಅನ್ನು ವೇಗವಾಗಿ ಓಡಿಸುತ್ತಿದ್ದರು. ಇದನ್ನು ಗಮನಿಸಿದ ಸುದೀಪ್ ತಮ್ಮ ಕಾರು ನಿಲ್ಲಿಸಿ ಬೈಕ್ ಸವಾರರಿಗೆ ಯಾಕೆ ಇಷ್ಟು ವೇಗವಾಗಿ ಬರುತ್ತಿದ್ದೀರ ಬ್ರದರ್ ಎಂದು ಪ್ರಶ್ನಿಸಿದರು. ಇದಕ್ಕೆ ಬೈಕ್ ಸವಾರರು ಸಾರಿ ಸರ್, ನಿಧಾನಕ್ಕೆ ಬರುತ್ತೀವಿ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

ಈ ವಿಡಿಯೋವನ್ನು ಶೇರ್ ಮಾಡಿರುವ ಸುದೀಪ್ ಅಭಿಮಾನಿಗಳು, ಬೈಕ್ ಸವಾರರ ಸುರಕ್ಷತೆ ಬಗ್ಗೆ ಸುದೀಪ್ ಮಾತನಾಡಿರುವ ನಿಜಕ್ಕೂ ಒಳ್ಳೆಯದ್ದು, ಈ ನಿಮ್ಮ ಪ್ರೀತಿಗೆ ಇಡೀ ನಿಮ್ಮ ಸ್ನೇಹಿತರು ಸದಾ ಚಿರಋಣಿ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com