ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ರಾಮಕೃಷ್ಣ ಡಿಕೆ (ಪ್ರವೀಣ್ ಕುಮಾರ್) ಆಯ್ಕೆಯಾಗಿದ್ದಾರೆ.
ಡಿ 29ರಂದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಎಂ ಜಿ ರಾಮಮೂರ್ತಿ, ಕಾರ್ಯದರ್ಶಿ ಕೆ ಮಂಜು, ಜಂಟಿ ಕಾರ್ಯದರ್ಶಿಯಾಗಿ ರಮೇಶ್ ಯಾದವ್, ಖಜಾಂಚಿಯಾಗಿ ಆರ್ ಎಸ್ ಗೌಡ ಆಯ್ಕೆಯಾಗಿದ್ದಾರೆ
ಭಾ ಮ ಗಿರೀಶ್, ಎನ್ ಎಂ ಸುರೇಶ್, ಎ ಗಣೇಶ್, ಉಮೇಶ್ ಬಣಕಾರ್, ಸುಬ್ರಮಣಿ(ಕರಿಸುಬ್ಬು), ಜೆ ಜಿ ಕೃಷ್ಣ, ಪ್ರಮೀಳಾ ಜೋಷಾಯ್, ನಂದಿಹಾಳ್, ಎಂ ನರಸಿಂಹಲು, ಎ ನರಸಿಂಹ, ಅಂಚೆಹಳ್ಳಿ ಶಿವಕುಮಾರ್, ಹಾಗೂ ಎಂ ಕೆ ಸುಂದರ್ ರಾಜ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ರಾಮಕೃಷ್ಣ ಡಿಕೆ ಅವರು, ನನ್ನ ಗೆಲುವಿಗೆ ಸಹಕರಿಸಿದ ಭಾ ಮ ಹರೀಶ್, ಭಾ ಮ ಗಿರೀಶ್ ಮೊದಲಾದವರಿಗೆ, ಚುನಾಯಿಸಿದ ಎಲ್ಲ ನಿರ್ಮಾಪಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಸಮಾಧಿಗೆ ತೆರಳಿ ಆಶೀರ್ವಾದ ಪಡೆದ ಬಳಿಕ ಮುಂದಿನ ಕೆಲಸಗಳತ್ತ ಗಮನ ಹರಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement