ನಮ್ಮ ದೇಶಕ್ಕೆ ಬಂದ ಹೊಸ ಕಾಯಿಲೆ. ಮೊಬೈಲ್ ರೋಗ. ಬಂಧು-ಬಾಂಧವರು, ಸ್ನೇಹಿತರು ಪಕ್ಕದಲ್ಲೆ ಇದ್ದರೂ ಸತ್ತವರಂತೆ ಭಾವಿಸಿ ಮೊಬೈಲಲ್ಲಿ ತಲ್ಲಿನರಾಗಿದ್ದು, ಇದೊಂದು ಗುಣಪಡಿಸಲಾಗದ ರೋಗವಾಗಿದೆ. ಈ ರೋಗಕ್ಕೆ ಮದ್ದು ಕಂಡು ಹಿಡಿಯದಿದ್ದರೆ, ಮಾನವರು ಏಕಾಂಗಿ ಎಂಬ ರೋಗದಿಂದ ಸಾವನ್ನಪ್ಪುತ್ತಾರೆ. ದಯಮಾಡಿ ಬೇಗ ಈ ರೋಗಕ್ಕೆ ಔಷಧಿ ಕಂಡು ಹಿಡಿದು ಇದರಿಂದ ಜನರನ್ನ ಉಳಿಸಬೇಕು ಎಂದು ದೇವರಲ್ಲಿ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.