ಮಾನವತೆಗೆ ಅಪಾಯ ಉಂಟುಮಾಡುವ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯಿರಿ: ನಟ ದರ್ಶನ್

"ಪುಲ್ವಾಮಾ ಭಯೋತ್ಪಾದಕ ದಾಳಿ ತೀವ್ರ ನೋವು ತಂದಿದೆ. ಹುತಾತ್ಮರಾದ ಯೋಧರ ಕುಟುಂಬಕ್ಕೆ ನನ್ನ ಸಂತಾಪವಿದೆ. ಮಾನವತೆಗೆ ಅಪಾಯವನ್ನುಂಟು ಮಾಡುವ ಭಯೋತ್ಪಾದನೆಯನ್ನು....
ದರ್ಶನ್, ಪುನೀತ್
ದರ್ಶನ್, ಪುನೀತ್
ಬೆಂಗಳೂರು: "ಪುಲ್ವಾಮಾ ಭಯೋತ್ಪಾದಕ ದಾಳಿ ತೀವ್ರ ನೋವು ತಂದಿದೆ. ಹುತಾತ್ಮರಾದ ಯೋಧರ ಕುಟುಂಬಕ್ಕೆ ನನ್ನ ಸಂತಾಪವಿದೆ. ಮಾನವತೆಗೆ ಅಪಾಯವನ್ನುಂಟು ಮಾಡುವ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯಬೇಕು" ಎಂದು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ದರ್ಶನ್ ತಮ್ಮ ಟ್ವೀಟ್ ಮೂಲಕ ಯೋಧರ ಬಲಿದಾನಕ್ಕೆ ಸಂತಾಪ ಸೂಚಿಸಿದ್ದು ಉಗ್ರ ಕೃತ್ಯವನ್ನು ಖಂಡಿಸಿದ್ದಾರೆ.

Extremely sad to hear about #PulwamaTerrorAttack news yesterday. Prayers are with those brave Soldiers & their Families. May those Brave souls R.I.P.

Terrorism poses a severe threat to Mankind. It should be completely rooted out from the society.

— Darshan Thoogudeepa (@dasadarshan) February 15, 2019
ಇನ್ನೊಂದೆಡೆ ನಟ ಪುನೀತ್ ರಾಜ್ ಕುಮಾರ್ ಸಹ ಉಗ್ರ ದಾಳಿಯನ್ನು ಕುರಿತು ಟ್ವೀಟ್ ಮಾಡಿದ್ದು "ದಾಳಿ ಸುದ್ದಿ ಕೇಳಿ ದುಃಖವಾಗಿದೆ, ಹುತಾತ್ಮ ಯೋಧರು, ಅವರ ಕುಟುಂಬದ ಪರವಾಗಿ ದೇವರನ್ನು ಪ್ರಾರ್ಥಿಸುವೆ " ಎಂದಿದ್ದಾರೆ.

Deeply saddened by #Pulwama incident... My thoughts and prayers for the martyrs & their families...

— Puneeth Rajkumar (@PuneethRajkumar) February 15, 2019
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ನಡೆದ ಯೋಧರ ವಾಹನದ ಮೇಲಿನ ಉಗ್ರ ದಾಳಿಯಲ್ಲಿ ನಲವತ್ತಕ್ಕೆ ಮಿಕ್ಕು ಯೋಧರು ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com