ಚಿರಂಜೀವಿ ಸರ್ಜಾ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದರ ಹೆಸರು ಭೈರವ. ಶಿವ ತೇಜಸ್ ನಿರ್ದೇಶಕರು, ಅವರು ಈ ಹಿಂದೆ ಮಳೆ, ಧೈರ್ಯಂ ಮತ್ತು ಲೌಡ್ ಸ್ಪೀಕರ್ ಚಿತ್ರಗಳನ್ನು ನಿರ್ದೇಶಿಸಿದ್ದರು.
ಕಮರ್ಷಿಯಲ್ ಮನರಂಜನೆ ಇರುವ ಈ ಚಿತ್ರದಲ್ಲಿ ಕೌಟುಂಬಿಕ ವಿಷಯಗಳು ಕೂಡ ಇವೆ. ನಿಶ್ಚಿತ ಕಂಬೈನ್ಸ್ ನಡಿ ಮಂಜುಳಾ ಶಿವಾರ್ಜುನ್ ಇದನ್ನು ನಿರ್ಮಿಸುತ್ತಿದ್ದಾರೆ.
ಮೇ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದೆ. ಸಿಂಗ, ಜುಗಾರಿ ಕ್ರಾಸ್ ಮತ್ತು ಖಾಕಿ ಚಿತ್ರಗಳ ಶೂಟಿಂಗ್ ನಲ್ಲಿ ಚಿರಂಜೀವಿ ಸರ್ಜಾ ಬ್ಯುಸಿಯಾಗಿದ್ದಾರೆ.