ನಾನು ಮೊದಲು ಕಲಾವಿದ, ನಂತರವಷ್ಟೇ ನಾಯಕ ಅಥವಾ ವಿಲನ್: ಧನಂಜಯ್

ನೆಗೆಟಿವ್ ಪಾತ್ರಗಳ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಡಾಲಿ ಧನಂಜಯ್ ಗೆ ನಾಯಕನಾಗುವ ಎಲ್ಲಾ ಗುಣಗಳಿಗೆ ಎಂಬುದನ್ನು ಸಾಬೀತು ಪಡಿಸಿದ್ದಾರೆ...
ಧನಂಜಯ್
ಧನಂಜಯ್
ನೆಗೆಟಿವ್ ಪಾತ್ರಗಳ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಡಾಲಿ ಧನಂಜಯ್ ಗೆ ನಾಯಕನಾಗುವ ಎಲ್ಲಾ ಗುಣಗಳಿಗೆ ಎಂಬುದನ್ನು  ಸಾಬೀತು ಪಡಿಸಿದ್ದಾರೆ.
ಮೊದಲಿಗೆ ವಿಲನ್ ರೋಲ್ ನಲ್ಲಿ ನೋಡಿ ಧನಂಜಯ್ ನನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದರು, ಸದ್ಯ ದರ್ಶನ್ ನಟನೆಯ ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೇ ವೇಳೆ,ಧ್ರುವ ಸರ್ಜಾ ನಟನೆಯ ಪೊಗರು ಹಾಗೂ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ತೋತಾಪುರಿ,  ಪಾಪ್ ಕಾರ್ನ್ ಮಂಕಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ, ಮೊದಲು ನಾನು ಕಲಾವಿದ, ನಂತರ ಹೀರೋ ಅಥವಾ ವಿಲನ್ ಎಂದು  ಗುರುತಿಸಿಕೊಳ್ಳುತ್ತೇನೆ,
ಹೀರೋ ಅಥವಾ ವಿಲನ್ ಯಾವುದೇ ಪಾತ್ರ ಮಾಡಿದರೂ ಪ್ರೇಕ್ಷಕರಿಂದ ಚಪ್ಪಾಳೆ ಮತ್ತು ವಿಶಲ್ಸ್ ಬರುತದೆ, ನನಗೆ ಇದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ, ಯಾವುದೇ ನಿರ್ದೇಶಕರು ಬಂದು ನೀನು ಇದೊಂದೇ ರೀತಿಯ ಪಾತ್ರವನ್ನು ಮಾಡಬೇಕು ಎಂದು ಹೇಳುವುದಿಲ್ಲ, ಹೀಗಾಗಿ ನನಗೆ ವಿವಿಧ ರೀತಿಯ ಪಾತ್ರಗಳು ಸಿಗುತ್ತಿವೆ, ನನ್ನಲ್ಲಿರುವ ನಟನಾ ಸಾಮರ್ಥ್ಯ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com