ಭೈರವ ಗೀತಾ ನಂತರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ನಿರ್ಮಾಪಕ ಭಾಸ್ಕರ್ ರಾಷಿ ಜೊತೆಯಾಗಿ, ಹಾರರ್ ಸಿನಿಮಾ ತಯಾರಿಸಲು ಒಂದಾಗಿದ್ದಾರೆ.
ಕನ್ನಡ ಮತ್ತು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ, ರಾಶಿ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗುವ ಸಿನಿಮಾವನ್ನು ಆರ್ ಜಿ ವಿ ನಿರ್ದೇಶನ ಮಾಡಲಿದ್ದಾರೆ.
ಭಾಸ್ಕರ್ ರಾಶಿ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ, ತಮ್ಮ ಸಂಸ್ಥೆಯ ಮುಂದಿನ ಹಾರರ್ ಸಿನಿಮಾವನ್ನು ಆರ್ ಜಿವಿ ನಿರ್ದೇಶನ ಮಾಡಬೇಕೆಂಬುದು ಬಾಸ್ಕರ್ ರಾಶಿ ಅವರ ಆಸೆಯಾಗಿದೆ. ಈ ಸಂಬಂಧ ಹಲವು ಸುತ್ತಿನ ಮಾತುಕತೆಗಳು ನಡೆದಿವೆ.
ಎಲ್ಲವೂ ಯೋಜಿಸಿದಂತೆ ನಡೆದರೇ ಮುಂದಿನ ಕೆಲವು ತಿಂಗಳುಗಳಲ್ಲಿ ಸಿನಿಮಾ ಕೆಲಸ ಆರಂಭವಾಗಲಿದೆ. ನಿರ್ಮಾಪಕ ಮತ್ತು ನಿರ್ದೇಶಕರು ಅಧಿಕೃತವಾಗಿ ಪ್ರಕಟಿಸಿದ ನಂತರ, ತಂತ್ರಜ್ಞರ ತಂಡ ಕೆಲಸ ಆರಂಭಿಸಲಿದೆ, ಮೂರು ಭಾಷಗೆಳಲ್ಲಿ ಕಥೆ ರಚನೆಯಾಗಲಿದೆ.