ಸಂಕ್ರಾಂತಿ ದಿನ ಮದಗಜ ಚಿತ್ರದ ಸ್ಕ್ರಿಪ್ಟ್ ಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಚಿತ್ರತಂಡ ಪೂಜೆ ಮಾಡಿಸಿಕೊಂಡು ಬಂದಿದೆ. ಇದೀಗ ಗಣರಾಜ್ಯೋತ್ಸವ ದಿನ 3ಡಿ ಮೋಷನ್ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿಶ್ಚಯಿಸಿದೆ.
ಶ್ರೀಮುರಳಿ ಅಭಿನಯಿಸುತ್ತಿರುವ ಚಿತ್ರಕ್ಕೆ ಉಮಾಪತಿ ಎಸ್ ಬಂಡವಾಳ ಹೂಡುತ್ತಿದ್ದಾರೆ. ಅಯೋಗ್ಯ ಸಿನಿಮಾದ ನಿರ್ದೇಶಕ ಮಹೇಶ್ ಕುಮಾರ್ ಈ ಚಿತ್ರವನ್ನು ಕೂಡ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದಲ್ಲಿ ನಾಯಕ ಅನಿವಾಸಿ ಭಾರತೀಯನಾಗಿದ್ದು ಕೌಟುಂಬಿಕ ಭಾವನೆ ಮತ್ತು ಆಕ್ಷನ್ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ. ಅರ್ಜುನ್ ಜನ್ಯ ಸಂಗೀತ, ಶ್ರೀಶ ಕುಡುವಳ್ಳಿ ಅವರ ಛಾಯಾಗ್ರಹಣವಿದೆ.
ಚೇತನ್ ಕುಮಾರ್ ಅವರ ಭರಾಟೆ ಮುಗಿದ ಮೇಲೆ ಮದಗಜ ಚಿತ್ರತಂಡವನ್ನು ಶ್ರೀಮುರಳಿ ಸೇರಲಿದ್ದಾರೆ.
Advertisement