ಬಿಚ್ಚುಗತ್ತಿ ಚಾಪ್ಟರ್ 1- ದಳವಾಯಿ ದಂಗೆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. 15ನೇ ಶತಮಾನದ ಪಾಳೆಗಾರ ಬರಮಣ್ಣ ನಾಯಕ ಅವರ ಪಾತ್ರದ ಚಿತ್ರೀಕರಣ ನಡೆಯುತ್ತಿದ್ದು 40ರಷ್ಟು ಚಿತ್ರೀಕರಣ...
ಬಿಚ್ಚುಗತ್ತಿ ಚಾಪ್ಟರ್ 1- ದಳವಾಯಿ ದಂಗೆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. 15ನೇ ಶತಮಾನದ ಪಾಳೆಗಾರ ಬರಮಣ್ಣ ನಾಯಕ ಅವರ ಪಾತ್ರದ ಚಿತ್ರೀಕರಣ ನಡೆಯುತ್ತಿದ್ದು 40ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ.
ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು ಫೆಬ್ರವರಿ ಮೊದಲ ವಾರದಿಂದ ಐದನೇ ಶೆಡ್ಯೂಲ್ ಪ್ರಾರಂಭವಾಗಲಿದೆ.
ಓಂ ಸಾಯಿಕೃಷ್ಣ ಪ್ರೊಡೆಕ್ಷನ್ ಅಡಿಯಲ್ಲಿ ಬಿಚ್ಚುಗತ್ತಿ ಯೋಜನೆ ನಿರ್ಮಾಣವಾಗುತ್ತಿದೆ. ಬಿಎಲ್ ವೇಣು ಅವರ ಕಾದಂಬರಿ ಆಧಾರಿತ ಚಿತ್ರವಾಗಿದೆ. ಚಿತ್ರದಲ್ಲಿ ಹರಿಪ್ರಿಯಾ ಸಹ ಐತಿಹಾಸಿಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.