ಭಟ್ಟರ 'ಪಂಚತಂತ್ರ'ದಲ್ಲಿ ರಘು ದೀಕ್ಷಿತ್ ಗಾನಾ ಬಜಾನಾ!

ಖ್ಯಾತ ನಿರ್ದೇಶಕ ಯೊಗರಾಜ ಭಟ್ ತಮ್ಮ ಮುಂದಿನ ಚಿತ್ರ "ಪ
ರಘು ದೀಕ್ಷಿತ್
ರಘು ದೀಕ್ಷಿತ್
ಬೆಂಗಳೂರು: ಖ್ಯಾತ ನಿರ್ದೇಶಕ ಯೊಗರಾಜ ಭಟ್ ತಮ್ಮ ಮುಂದಿನ ಚಿತ್ರ "ಪ<ಚತಂತ್ರ" ಕ್ಕಾಗಿ ವಿ. ಹರಿಕೃಷ್ಣ ಅವರನ್ನು ಸಂಗೀತ ನಿರ್ದೇಶಕರನ್ನಾಗಿಸಿಕೊಂಡಿರುವುದು ನಿಮಗೆ ಗೊತ್ತಿದೆ. ಆದರೆ ಈಗ ಬಂದ ಸುದ್ದಿಯಂತೆ ಖ್ಯಾತ ಗಾಯಕ, ಸಂಗೀತಗಾರರಾಗಿರುವ ರಘು ದೀಕ್ಷಿತ್ ಈ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಲಿದ್ದಾರೆ.
ಚಿತ್ರದ ಆಡಿಯೋ ಲಾಂಚ್ ಮುಂದಿನ ವಾರ ನಡೆಯಲಿದೆ.ವಿಹಾನ್ ಹಾಗೂ ಸೋನಾಲ್ ಮೊಂಟಾರಿಯೋ ನಾಯಕ, ನಾಯಕಿಯರಾಗಿರುವ "ಪಂಚತಂತ್ರ" ದಲ್ಲಿ ರಘು ಹಾಡು ಮೂಡಿಬರುವುದು ಖಚಿತ ಎನ್ನಲಾಗಿದ್ದು ಯಾವ ನಿರ್ದಿಷ್ಟ ಟ್ರ್ಯಾಕ್ ರಘು ದನಿಯಲ್ಲಿ ಬರತ್ತೆ ಎನ್ನುವುದನ್ನು ಇನ್ನಷ್ಟೇ ಕಾದು ನೊಡಬೇಕಿದೆ. ಚಿತ್ರತಂಡ ಇದೀಗ ಸೆನ್ಸಾರ್ ಮಂಡಳಿಯ ಅನುಮತಿಗಾಗಿ ಕಾಯುತ್ತಿದ್ದು ಒಮ್ಮೆ ಸೆನ್ಸಾರ್ ಒಕೆ ಆದ ಬಳಿಕ ಚಿತ್ರ ಬಿಡುಗಡೆ ಕುರಿತು ಅಧಿಕೃತ ಘೋಷಣೆ ಮಾಡಲಿದೆ.
ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಡ್ಕ  ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಫೆಬ್ರವರಿಗೆ ತೆರೆಗೆ ಬರುವ ಎಲ್ಲಾ ನಿರೀಕ್ಷೆ ಇದೆ.ಇನ್ನು ತೆಲುಗು, ಹಿಂದಿಯಲ್ಲಿಯೂ ಈ ಚಿತ್ರ ತೆರೆಕಾಣುತ್ತಿದ್ದು ಅಲ್ಲಿಯೂ ಸಹ ಯೋಗರಾಜ್ ಭಟ್ ಅಲ್ಲಿನ ಚಿತ್ರಗಳಲ್ಲಿ ಸಹ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com