ಹೌದು, ಮಂಗಳವಾರ ಜುಲೈ 2 ಗಣೇಶ್ ಹುಟ್ಟಿದ ದಿನ. ಆದರೆ ತಂದೆ ವಿಧಿವಶರಾದ ದುಃಖದಲ್ಲಿರುವ ಗಣೇಶ್, ಈ ವರ್ಷ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಮುಂಚಿತವಾಗಿಯೇ ಟ್ವೀಟ್ ಮಾಡಿದ್ದರು. ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಆಭಿಮಾನಿಗಳು ಮನೆಗೆ ಬರುವುದು ಬೇಡ, ಹಾರ, ತುರಾಯಿಗೆ ಹಣ ಖರ್ಚು ಮಾಡಬೇಡಿ, ಅದೇ ದುಡ್ಡನ್ನು ಅನಾಥಾಶ್ರಮಕ್ಕೆ ನೀಡಿ, ನಿಮ್ಮ ಪ್ರೀತಿಗೆ ನಾನೆಂದೂ ಋಣಿಯಾಗಿರುವೆ ಎಂದು ಮನವಿಯನ್ನೂ ಮಾಡಿಕೊಂಡಿದ್ದರು.