'ಜಿತನ್ 2' ನಟ ಆದಿಕೇಶವರೆಡ್ಡಿ ಕನ್ನಡಕ್ಕೆ: 'ಟರ್ನಿಂಗ್ ಪಾಯಿಂಟ್' ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ

ಜಿತನ್ 2 ಎಂಬ ತಮಿಳು ಹಾರರ್ ಚಿತ್ರದ ನಾಯಕ ಆದಿ ಕೇಶವ ರೆಡ್ಡಿ ಈಗ ಕನ್ನಡದ " ಟರ್ನಿಂಗ್ ಪಾಯಿಂಟ್" ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ.
ಆದಿಕೇಶವರೆಡ್ಡಿ
ಆದಿಕೇಶವರೆಡ್ಡಿ
ಜಿತನ್ 2 ಎಂಬ ತಮಿಳು ಹಾರರ್ ಚಿತ್ರದ ನಾಯಕ ಆದಿ ಕೇಶವ ರೆಡ್ಡಿ ಈಗ ಕನ್ನಡದ "ಟರ್ನಿಂಗ್ ಪಾಯಿಂಟ್" ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ.
ವಿನು ಮಹೇಶ್ ರಾಯ್ ನಿರ್ದೇಶನದ ಈ ಚಿತ್ರ ಒಂದು ಆಕ್ಷನ್ ಕಾಮಿಡಿ ಚಿತ್ರವೆನ್ನಲಾಗಿದೆ."ಇದು ಕನ್ನಡದಲ್ಲಿ ನನ್ನ ಮೊದಲ ಚಿತ್ರವಾಗಲಿದೆ, ಮತ್ತು ಚಿತ್ರದ ಶೀರ್ಷಿಕೆಯಂತೆಯೇ ನನ್ನ ವೃತ್ತಿ ಬದುಕಲ್ಲಿ ಕೂಡ ಟರ್ನಿಂಗ್ ಪಾಯಿಂಟ್ ಆಗಿರಲಿದೆ ಎಂದು ನಾನು ಭಾವಿಸುತ್ತೇನೆ. ನಟ ಹೇಳುತ್ತಾರೆ.
ಇತ್ತೀಚೆಗೆ ಲಹರಿ ಮ್ಯೂಸಿಕ್ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ಚಿತ್ರವು ಆಗಸ್ಟ್ ನಲ್ಲಿ ತೆರೆಗೆ ಬರಲಿದೆ.
ಏತನ್ಮಧ್ಯೆ ನಟ ಆದಿಕೇಶವ ರೆಡ್ಡಿ ತಾವು ಮಜೂರ್ ಎಂಬ ಹೆಸರಿನ ಎರಡನೇ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶಕರಾಗಿ ರಮೇಶ್ ಇದ್ದಾರೆ.
ಟರ್ನಿಂಗ್ ಪಾಯಿಂಟ್ ಚಿತ್ರದಲ್ಲಿ  ಅನಿಕಾ ರಾವ್ ಮತ್ತು ದಿಶಾ ಪೂವಯ್ಯ ವಿಶಿಷ್ಟ ತಾರಾಂಗಣದಲ್ಲಿದ್ದು ವಿನ್ಸೆಂಟ್ ಛಾಯಾಗ್ರಹಣವಿದೆ.ಎಟಿ ರವಿಶ್ ಸಂಗೀತ ನಿರ್ದೇಶಕರಾಗಿರುವ ಈ ಚಿತ್ರದಲ್ಲಿ ಒಟ್ಟು 45 ಸಂಗೀತಗಾರರು ಕೆಲಸ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com