ಇದಾಗಲೇ ಚಿತ್ರತಂಡ ಶೇ.50ರಷ್ಟು ಚಿತ್ರೀಕರಣ ಪೂರೈಸಿದ್ದು ಬರುವ ದಿನಗಳಲ್ಲಿ ರಾಜ್ ಅವರ ಪಾತ್ರದ ಕುರಿತು ಹೆಚ್ಚಿನ ವಿವರ ಬಹಿರಂಗಪಡಿಸುವುದಾಗಿ ಹೇಳಿದೆ. ರಕ್ಷಿತ್ ಬದುಕಲ್ಲಿ ಚಾರ್ಲಿಯನ್ನು ಕರೆತರುವ ಪ್ರಯತ್ನ ಈ ಚಿತ್ರದಲ್ಲಿದ್ದು ಈ ಚಿತ್ರದಲ್ಲಿ ರಾಜ್ ಪಶುವೈದ್ಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಕೆ ಕಿರಣರಾಜ್ ಹೇಳುತ್ತಾರೆ, ಚಿತ್ರದ ಇತ್ತೀಚಿನ ಸ್ಟಿಲ್ಗಳನ್ನು ಅವರು ಪತ್ರಿಕೆಯೊಡನೆ ಹಂಚಿಕೊಂಡಿದ್ದಾರೆ.