ಮುನಿರತ್ನ 'ಕುರುಕ್ಷೇತ್ರ'ದ ಪಂಚ ಪಾಂಡವರು ಇವರೇ!

ಕನ್ನಡದ ಬಹುನಿರೀಕ್ಷಿತ ಮುನಿರತ್ನ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕುರುಕ್ಷೇತ್ರ ಪೌರಾಣಿಕ ಚಿತ್ರವಾಗಿದ್ದು 2ಡಿ ಮತ್ತು 3ಡಿಗಳಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.
ಪಂಚ ಪಾಂಡವರ ಪಾತ್ರದಲ್ಲಿ ಕಲಾವಿದರು
ಪಂಚ ಪಾಂಡವರ ಪಾತ್ರದಲ್ಲಿ ಕಲಾವಿದರು
ಕನ್ನಡದ ಬಹುನಿರೀಕ್ಷಿತ ಮುನಿರತ್ನ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕುರುಕ್ಷೇತ್ರ ಪೌರಾಣಿಕ ಚಿತ್ರವಾಗಿದ್ದು 2ಡಿ ಮತ್ತು 3ಡಿಗಳಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಇನ್ನು ಚಿತ್ರದಲ್ಲಿ ಪಂಚ ಪಾಂಡವರಾಗಿ ಯಾರೆಲ್ಲಾ ಅಭಿನಯಿಸಿದ್ದಾರೆ ಎಂದು ಗೊತ್ತಾಗಿದೆ.
ಮುನಿರತ್ನ ಕುರುಕ್ಷೇತ್ರ ಚಿತ್ರ ಪಂಚ ಭಾಷೆಗಳಲ್ಲಿ ಆಗಸ್ಟ್ 12ರಂದು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇನ್ನು ಚಿತ್ರದಲ್ಲಿ ಡಿಬಾಸ್ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರದ ಕುರಿತಂತೆ ಅದಾಗಲೇ ನಿರೀಕ್ಷೆಗಳು ಜಾಸ್ತಿಯಾಗಿವೆ. 
ಇನ್ನು ಚಿತ್ರದಲ್ಲಿ ಪಂಚ ಪಾಂಡವರಾಗಿ ಶಶಿಕುಮಾರ್(ಧರ್ಮರಾಯ), ಡ್ಯಾನಿಶ್ ಅಖ್ತರ್ ಸೈಫಿ(ಭೀಮ), ಸೋನು ಸೂದ್(ಅರ್ಜುನ), ಯಶಸ್ ಸೂರ್ಯ(ನಕುಲ) ಮತ್ತು ಚಂದನ್(ಸಹದೇವ) ಅಭಿನಯಿಸಿದ್ದು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com