ನನ್ನ ಮುಂದಿನ ಸಿನಿಮಾಗೆ ಶರಣ್ ನಾಯಕ: ಮಹೇಶ್ ದಾನಣ್ಣನವರ್

ಗಾಳಿಪಟ-2 ಸಿನಿಮಾ ನಿರ್ಮಾಪಕ ಮಹೇಶ್ ದಾನಣ್ಣನವರ್ ತಮ್ಮ ಮುಂದಿನ ಸಿನಿಮಾ ನಾಯಕ ಶರಣ್ ಎಂದು ಘೋಷಿಸಿದ್ದಾರೆ. ...
ನನ್ನ ಮುಂದಿನ ಸಿನಿಮಾಗೆ ಶರಣ್ ನಾಯಕ: ಮಹೇಶ್ ದಾನಣ್ಣನವರ್
ಗಾಳಿಪಟ-2 ಸಿನಿಮಾ ನಿರ್ಮಾಪಕ ಮಹೇಶ್ ದಾನಣ್ಣನವರ್ ತಮ್ಮ ಮುಂದಿನ ಸಿನಿಮಾ ನಾಯಕ ಶರಣ್ ಎಂದು ಘೋಷಿಸಿದ್ದಾರೆ. 
ತಮ್ಮ ಮುಂದಿನ ಚಿತ್ರಕ್ಕೆ ಶರಣ್ ನಾಯಕರಾಗಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ,  ಇದೊಂದು ರೋಮ್ಯಾಂಟಿಕ್ ಕಾಮಿಡಿಯಾಗಿದ್ದು, ಶರಣ್ ಗೆ ಈ ಪಾತ್ರ ಸೂಕ್ತವಾಗಿದೆ ಎಂದು ಹೇಳಿದ್ದಾರೆ,
ಗಾಳಿಪಟ-2 ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ನಂತರ  ಮುಂದಿನ ಚಿತ್ರಕ್ಕೆ ಕೈ ಹಾಕುವುದಾಗಿ ತಿಳಿಸಿರುವ ಮಹೇಶ್ ದಾವಣ್ಣನವರ್, ಮುಂದಿನ ಸಿನಿಮಾ  ಚಿತ್ರೀಕರಣ ಬಹುತೇಕ ಉತ್ತರ ಕರ್ನಾಟಕದಲ್ಲೆ ನಡೆಯಲಿದೆ, ತಮ್ಮ ಪ್ರಾಜೆಕ್ಟ್ ಆರಂಭವಾಗುವ ಮುನ್ನ ತಮ್ಮ ಸಿನಿಮಾದ ಬಗ್ಗೆ ಎಲ್ಲಾ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ನನ್ನ ಮುಂದಿನ ಚಿತ್ರಕ್ಕೆ ಶರಣ್   ನಾಯಕ ಎಂದು ಹೇಳಿಕೊಳ್ಳುವುದು ನನಗೆ ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com