ಯೂಟ್ಯೂಬ್ ಚಾನೆಲ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ನಟ ಜೈ ಆಕಾಶ್, ತಮಗೆ ಯಾವುದೇ ನಿರ್ದೇಶಕ ಅವಕಾಶ ನೀಡುತ್ತಿಲ್ಲ. ಬೇಕೆಂದೇ ತಮ್ಮನ್ನು ತುಳಿಯಲು ಯತ್ನಿಸುತ್ತಿದ್ದಾರೆ. ಈಗ ಕೆಜಿಎಫ್ ಮೂಲಕ ಸದ್ದು ಮಾಡಿರುವ ನಟ ಯಶ್ ಗೆ ನಟನೆ ಹೇಳಿಕೊಟ್ಟಿದ್ದೇ ನಾನು ಎಂಬರ್ಥದಲ್ಲಿ ಹೇಳಿಕೆ ನೀಡಿ ನಟ ಜೈ ಆಕಾಶ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಅಂತೆಯೇ ಈಗಲೂ ನಾನು ಸಂಭಾವನೆ ಇಲ್ಲದೇ ನಟಿಸಲು ಸಿದ್ಧ. ಆದರೆ ಉತ್ತಮ ನಿರ್ದೇಶಕ ಮತ್ತು ನಿರ್ಮಾಪಕರು ಬೇಕು. ನನ್ನ ಕೆಲ ಚಿತ್ರಗಳನ್ನು ಬೇಕೆಂದೇ ಕೆಲವರು ತೆರೆಕಾಣದಂತೆ ಮಾಡಿದ್ದಾರೆ ಎಂದು ನಟ ಜೈ ಆಕಾಶ್ ಆರೋಪಿಸಿದ್ದಾರೆ.