ಕಾರ್ನಾಡ್ ಚಿತ್ರ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ', 'ಗೋದೋಳಿ' ಚಿತ್ರದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹಿರಿಯ ನಿರ್ದೇಶಕ ನಾಗಾಭರಣ ಮಾತನಾಡಿ "ಅವರೊಬ್ಬ ಅದ್ಭುತ ಗುರುವಾಗಿದ್ದರು. ಎಡಿಟಿಂಗ್ ಬಗೆಗೆ ನಾನು ಮೊದಲು ಕಲಿತದ್ದು ಅವರ ಜತೆಗಿದ್ದಾಗ."ಆನ್ವೇಷಣೆ", ""ನೆನಪಿನ ದೋಣಿ", "ಮೈಸೂರು ಮಲ್ಲಿಗೆ" ಚಿತ್ರಗಳಲ್ಲಿ ನಾನು ಅವರಿಗೆ ಆಕ್ಷನ್ ಕಟ್ ಹೇಳುವುದಕ್ಕೆ ಅವಕಾಶ ದೊರಕಿತ್ತು. ಅವರೇ ಕಲಿಸಿದ್ದನ್ನು ನಾನು ಅವರ ಮೇಲೆ ಪ್ರಯೋಗಿಸಿದ್ದೆ" ನಾಗಾಭರಣ ಹೇಳಿದ್ದಾರೆ.