2011-12 ರಲ್ಲಿ ಪುನೀತ್ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು, ನಟ ಪುನೀತ್ ಈ ಕಾರ್ಯಕ್ರಮ ಒಪ್ಪಿಕೊಳ್ಳಲು 2 ಕಾರಣಗಳಿವೆ, ನಾವು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ನೋಡಿ ಬೆಳೆದೆವು. ಈ ಕಾರ್ಯಕ್ರಮ ದೇಶವನ್ನು ಒಟ್ಟಿಗೆ ಕರೆತಂದಿತ್ತು, ಭಾಷೆಯ ಹೊರತಾಗಿಯೂ ಇಡೀ ದೇಶದ ಜನ ಅಮಿತಾಬ್ ಬಚ್ಚನ್ ಅವರನ್ನು ನೋಡಲು ಕಾಯುತ್ತಿದ್ದರು. ಇದು ನನಗೆ ಸ್ಪೂರ್ತಿ, ಮತ್ತೊಂದು ಕಾರಣ, ನನ್ನ ತಂದೆ ಡಾ.ರಾಜ್ ಕುಮಾರ್ ಈ ಕಾರ್ಯಕ್ರಮ ಅತಿಯಾಗಿ ಇಷ್ಟ ಪಡುತ್ತಿದ್ದರು, ನಾನು ಈ ಕಾರ್ಯಕ್ರಮ ನಡೆಸಿಕೊಡುವುದರಿಂದ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂಬ ಕಾರಣಕ್ಕೂ ನಾನು ಈ ಕಾರ್ಯಕ್ರಮ ಒಪ್ಪಿಕೊಂಡಿದ್ದೇನೆ ಎಂದು ಪುನೀತ್ ಹೇಳಿದ್ದಾರೆ.