ಸುದೀಪ್ ಅವರ ಮುಂದಿನ ಸಿನಿಮಾವನ್ನು ಸೂರಿ ನಿರ್ದೇಶಿಸಲಿದ್ದಾರೆ ಎಂಬ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹೇಳಿಕೆಗೆ ಗರಂ ಆಗಿರುವ ಸೂರಿ, ಸುದೀಪ್ ಅವರನ್ನು ನಾನು ರಂಗ ಎಸ್ ಎಸ್ ಎಲ್ ಸಿಯಿಂದ ನೋಡಿದ್ದೇನೆ, ಅವರೊಬ್ಬ ಉತ್ತಮ ನಟ, ಅವರಿಗಾಗಿ ಕೆಲಸ ಮಾಡಬೇಕೆಂದರೇ ಸಮಯ ತೆಗೆದುಕೊಳ್ಳುತ್ತಗೆ, ವಿಭಿನ್ನವಾಗಿ ಅವರಿಗಾಗಿ ನಾನು ಸಿದ್ಧತೆ ಮಾಡಿಕೊಳ್ಳಬೇಕು, ಆಗ ಮಾತ್ರ ಅವರ ಜೊತೆ ಕೆಲಸ ಮಾಡಲು ಸಾಧ್ಯ,. ಅದನ್ನು ನಾನು ಹಿಂದೆ ಅವರ ಜೊತೆ ಮಾತನಾಡಿದ್ದಾಗ ತಿಳಿಸಿದ್ದೇನೆ.