ಸುಮಾರು 50 ಸಾವಿರ ಕುಟುಂಬಗಳಿರುವ, 85 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರೋದ್ಯಮ ಎಂದೂ ಕಾಣದ ದುಸ್ಥಿತಿಗೆ ತಲುಪಿದೆ. ತಮ್ಮನ್ನು ತಾವು ಚಿತ್ರೋದ್ಯಮದ ಬ್ರಹ್ಮ ಎಂದು ಸ್ವಯಂ ಭಾವಿಸಿಕೊಂಡಿರುವ ಸಾ ರಾ ಗೋವಿಂದು, ಬದಲಾವಣೆಗೆ ಅವಕಾಶ ಕೊಡದೆ, ಮಂಡಳಿಯಲ್ಲಿ ಕುಟುಂಬ ರಾಜಕಾರಣಕ್ಕೆ ಯತ್ನಿಸಿದ್ದಾರೆ. ಕುಸಿಯುತ್ತಿರುವ ಚಿತ್ರರಂಗಕ್ಕೆ ಚೈತನ್ಯ ನೀಡಲು ಅಶಕ್ತರಾದವರನ್ನು ಕುರ್ಚಿಯಲ್ಲಿ ಕೂರಿಸುವ ಹುನ್ನಾರ ನಡೆಸಿದ್ದು, ಹೊಸ ಆಲೋಚನೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ” ಎಂದು ಕಿಡಿಕಾರಿದರು.