ಬೆಂಗಳೂರು:'ಒಂದು ಮೊಟ್ಟೆಯ ಕಥೆ ' ಚೊಚ್ಚಲ ಚಿತ್ರ ನಿರ್ದೇಶನ ಹಾಗೂ ನಟನಾ ಕೌಶಲ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದ ರಾಜ್ ಬಿ ಶೆಟ್ಟಿ ಇದೀಗ 'ಹರಿಹರ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಸಿಟಿ ಎಕ್ಸ್ ಪ್ರೆಸ್ ಗೆ ಈ ವಿಷಯ ತಿಳಿಸಿರುವ ರಾಜ್, ಈ ಚಿತ್ರದಲ್ಲಿ ಇಬ್ಬರು ಹಿರೋಗಳು ಇರಲಿದ್ದಾರೆ. ತಾನೇ ಹಿರೋ ಆಗಿದ್ದು, ಮತ್ತೊಬ್ಬರನ್ನು ಸದ್ಯದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಗಾಂಧಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಕಥೆ ಸಿದ್ದವಾಗಿದೆ. ಮೇ ಮಧ್ಯಭಾಗದಿಂದ ಚಿತ್ರೀಕರಣ ಆರಂಭಿಸಲಾಗುವುದು. ಮತ್ತೊಬ್ಬ ಹೀರೋವನ್ನು ಅಂತಿಮಗೊಳಿಸಿದ ನಂತರ ನನ್ನ ಭಾಗವನ್ನು ಆರಂಭಿಸುತ್ತೇನೆ. ಈಗ ಲೋಕೇಷನ್ ಅಂತಿಮಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
Advertisement