ಬೆಂಗಳೂರು: "ಯಜಮಾನ" ಚಿತ್ರದ ನಂತರ ನಟಿ ತಾನ್ಯಾ ಹೋಪೆಗೆ ಸ್ಯಾಂಡಲ್ ವುಡ್ ನಲ್ಲಿ ಅಪೂರ್ವ ಸ್ವಾಗತ ಸಿಕ್ಕಿದೆ. ಬಸಣ್ಣಿ ಎಂದೇ ಜನಪ್ರಿಯವಾಗಿರುವ ಈ ನಟಿ ತನ್ನ ಮೊದಲ ಚಿತ್ರ ಬಿಡುಗಡೆಯಾಗಿ ಇನ್ನೂ ಮೂರನೇ ವಾರದಲ್ಲೇ ಎರಡನೇ ಚಿತ್ರದ ಬಿಡುಗಡೆ ಕಾಣುತ್ತಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ "ಉದ್ಘರ್ಷ" ಚಿತ್ರ ದಕ್ಷಿಣ ಭಾರತದ ಪ್ರಮುಖ ಬಾಷೆಗಳಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ತಾನ್ಯಾ, ಸಾಯಿ ಧನ್ಸಿಕಾ, ಠಾಕೂರ್ ಅನೂಪ್ ಸಿಂಗ್, ಕಬೀರ್ ಧುಹಾನ್ ಸಿಂಗ್, ಶ್ರದ್ದಾ ದಾಸ್ ಮೊದಲಾದವರ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.