ಇಂದು ದಕ್ಷಿಣ ಭಾರತದ ಚಿತ್ರರಂಗ ದೇಶದ ಗಮನ ಸೆಳೆದಿದೆ. ಚಿತ್ರಪ್ರೇಮಿಗಳಿಗೆ ಇಂದು ಭಾಷೆಯ ಚೌಕಟ್ಟು ಇಲ್ಲ. ಆದರೆ ಉದ್ಯಮ, ವ್ಯಾಪಾರ, ಹಣದ ವಿಚಾರ ಬಂದಾಗ ಹಿಂದಿ ಚಿತ್ರೋದ್ಯಮ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ತೆಲುಗಿನ ಬಾಹುಬಲಿ ಚಿತ್ರ ಇಡೀ ಭಾರತೀಯರ ಗಮನ ಸೆಳೆಯಿತು. ಇಂದು ಬೇರೆ ಭಾಷೆಗಳಲ್ಲಿ ಕೂಡ ಬಾಹುಬಲಿಯಂತೆ ಸಿನಿಮಾ ಕೊಂಡೊಯ್ಯಬೇಕು ಎಂಬ ಯೋಚನೆಗಳು ಬಂದಿವೆ. ಬಾಲಿವುಡ್ ಗೆ ತನ್ನದೇ ಆದ ನಿಖರತೆ, ವಿಶ್ವಾಸಾರ್ಹತೆಯಿದೆ. ಇನ್ನು ಸಮಾನತೆ, ಹಣ ವೆಚ್ಚ, ಸೃಜನಾತ್ಮಕತೆ ವಿಚಾರದಲ್ಲಿ ಕಲಾವಿದನಾಗಿ ನಾನು ಎಲ್ಲಾ ಭಾಷೆಯ ಚಿತ್ರಗಳನ್ನು ಸಮಾನವಾಗಿ ಕಾಣುತ್ತೇನೆ ಎಂದರು.