ರಕ್ಷಿತಾ ಕಾಲೆಳೆದ ಕಿಚ್ಚ ಸುದೀಪ್ ಟ್ವೀಟ್, ವೈರಲ್!

ಚಂದ್ರ ಲೇಔಟ್ ನಿಂದ ಮಿನರ್ವ ಮಿಲ್ ಸಮೀಪ ಬರಲಾಗದ ನೀವು ಮುಂಬೈವರೆಗೂ ಹೇಗೆ ಬರುತ್ತೀರಿ ಎಂದು ಯೋಚಿಸಿಯೇ ಕರೆಯಲಿಲ್ಲ ಎಂದು ಕಿಚ್ಚ ಸುದೀಪ್ ರಕ್ಷಿತಾರ ಕಾಲೆಳೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಲ್ಮಾನ್ ಖಾನ್ ಅಭಿನಯದ ದಬಾಂಗ್ -3 ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು, ಮುಂಬೈಯಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಸುದೀಪ್ ಈಗಾಗಲೇ ಚಿತ್ರತಂಡವನ್ನು ಸೇರಿಸಿಕೊಂಡಿದ್ದು,  ಹೋಗುವಾಗ ತಮ್ಮ ಜೊತೆಗೆ ದಿ ವಿಲಿನ್ ನಿರ್ದೇಶಕ ಪ್ರೇಮ್ ಅವರನ್ನೂ ತಮ್ಮೊಡನೆ ಕರೆದುಕೊಂಡು  ಹೋಗಿದ್ದಾರೆ.
ಅದಕ್ಕೆ ಟ್ವಿಟರ್ ಮೂಲಕವೇ ಪ್ರತಿಕ್ರಿಯಿಸಿರುವ ಸುದೀಪ್,  ದಿ ವಿಲನ್ ಚಿತ್ರ ಸುಮಾರು 2 ವರ್ಷಗಳವರೆಗೂ ಶೂಟಿಂಗ್ ಆಯಿತು. ಒಂದೇ ಒಂದು ದಿನವೂ ಸೆಟ್ ಗೆ ಆಗಮಿಸಿದ್ದ ನೆನಪು ನನಗಿಲ್ಲ ಎಂದಿದ್ದಾರೆ.
ಚಂದ್ರ ಲೇಔಟ್ ನಿಂದ ಮಿನರ್ವ ಮಿಲ್ ಸಮೀಪ ಬರಲಾಗದ ನೀವು ಮುಂಬೈವರೆಗೂ ಹೇಗೆ ಬರುತ್ತೀರಿ ಎಂದು ಯೋಚಿಸಿಯೇ ಕರೆಯಲಿಲ್ಲ ಎಂದು ರಕ್ಷಿತಾರ ಕಾಲೆಳೆದಿದ್ದಾರೆ. ಸದ್ಯ ಈ ಟ್ವೀಟ್  ಭಾರೀ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com