ಚೌಕದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದ ದರ್ಶನ್ ಅವರಿಗೆ ಇದೀಗ ತರುಣ್ ಪೂರ್ಣ ಪ್ರಮಾಣದ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇಂದು ಚಿತ್ರದ ಮುಹೂರ್ತ ನಡೆಯಲಿದ್ದು ನಾಳೆಯಿಂದ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ. ಇನ್ನು ವಿಶೇಷತೆ ಏನೆಂದರೆ ಚಿತ್ರೀಕರಣದ ಸಂದರ್ಭದಲ್ಲಿ ಮೊಬೈಲ್ ಬ್ಯಾನ್ ಮಾಡಲಾಗಿದೆ. ಈ ಕಠಿಣ ಕ್ರಮವನ್ನು ತರುಣ್ ಸುಧೀರ್ ತೆಗೆದುಕೊಂಡಿದ್ದಾರೆ.