ಹನಿಮೂನ್ ಶೂಟಿಂಗ್ ಗಾಗಿ ಕೇರಳಕ್ಕೆ ತೆರಳಿದ್ದ ನಟ ಎನ್ ಎಸ್ ನಾಗಭೂಷಣ್ ಮತ್ತು ಸಂಜನಾ ಆನಂದ್ ಬೆಂಗಳೂರಿಗೆ ವಾಪಾಸಾಗಿದ್ದಾರೆ.
ಶಿವರಾಜ್ ಕುಮಾರ್ ಅವರ ಶ್ರೀಮುತ್ತು ಸಿನಿ ಸರ್ವೀಸ್ ಮತ್ತು ಸಕ್ಖತ್ ಸ್ಟುಡಿಯೋ ಸಹಯೋಗದಲ್ಲಿ ವಿಕ್ರಮ್ ಯೋಗಾನಂದ್ ನಿರ್ದೇಶನದ ಹೊಸ ಕನ್ನಡ ವೆಬ್ ಸಿರೀಸ್ ಇದಾಗಿದೆ, ಕೇರಳದ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ವಾಪಾಸಾಗಿದೆ.
ಕೇರಳದಲ್ಲಿ ಶೂಟಿಂಗ್ ಮಾಡಿರುವ ಮೊದಲ ವೆಬ್ ಸಿರೀಸ್ ಹನಿಮೂನ್ ಆಗಿದೆ, ಮಲಯಾಳಂನ ಹಲವು ಕಲಾವಿದರು ಇದರಲ್ಲಿ ಭಾಗಿಯಾಗಿದ್ದಾರೆ.
ಶ್ರೀಶಾ ಕುರುವಳ್ಳಿ ಕ್ಯಾಮೆರಾ ವರ್ಕ್ ಮತ್ತು ವಸುಕಿ ವೈಭವ್ ಸಂಗೀತ ನೀಡಿದ್ದಾರೆ. ಬೆಂಗಳೂರಿನಲ್ಲಿ ಇನ್ನುಳಿದ ಭಾಗದ ಶೂಟಿಂಗ್ ನಡೆಯಲಿದೆ.