ಚಾರ್ಲಿ ಚಾಪ್ಲಿನ್ ಆಗಲು ರೆಡಿಯಾಗುತ್ತಿದ್ದಾರೆ 'ಬಿಗ್ ಬಾಸ್' ರನ್ನರ್ ಅಪ್ ನವೀನ್ ಸಜ್ಜು!

ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್‌ ತಮ್ಮ ಎರಡನೇ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ..
ನವೀನ್ ಸಜ್ಜು
ನವೀನ್ ಸಜ್ಜು
ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್‌ ತಮ್ಮ ಎರಡನೇ ಚಿತ್ರಕ್ಕೆ ತಯಾರಾಗುತ್ತಿದ್ದಾರೆ.
ಈಗಾಗಲೇ ಸ್ಕ್ರಿಪ್ಟ್‌ ಕೆಲಸ ಆರಂಭಿಸಿದ್ದೇವೆ. ಸದ್ಯಕ್ಕೆ ನವೀನ್‌ ಸಜ್ಜು ಅವರು ನಾಯಕರಾಗಿದ್ದಾರೆ. ಉಳಿದ ವಿವರಗಳನ್ನು ಮುಂದಿನ ದಿನದಲ್ಲಿ ಹೇಳುತ್ತೇವೆ. ಕೆಮಿಸ್ಟ್ರಿ ಆಫ್‌ ಕರಿಯಪ್ಪ ಥರನೇ ಈ ಸಿನಿಮಾ ಕೂಡಾ ಎಲ್ಲರಿಗೂ ಇಷ್ಟವಾಗಲಿದೆ'ಎಂದು ಹೇಳುತ್ತಾರೆ ನಿರ್ದೇಶಕ ಕುಮಾರ್‌. 
ನವೀನ್‌ ಸಜ್ಜು ಈ ಹಿಂದೆ ಅವರು ತಮಟೆ ಎಂಬ ಸಿನಿಮಾ ಮೂಲಕ ನಾಯಕರಾಗಿದ್ದರು, ಆದರೆ ಆ ಸಿನಿಮಾ ಕಾರಣಾಂತರಗಳಿಂದ ನಿಂತು ಹೋಯಿತು. ಸದ್ಯ ಸಲಗ ಸಿನಿಮಾಗೆ ಟ್ಯೂನ್‌ ಹಾಕುವುದರಲ್ಲಿ ಅವರು ಬಿಝಿ ಇರುವ ಅವರನ್ನು ಕುಮಾರ್‌ ಚಾರ್ಲಿಚಾಪ್ಲಿನ್‌ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com