'ಅಮರ್' ಗಾಗಿ ದರ್ಶನ್ ಕೋಟ್ಯಾಧಿಪತಿ!

ನಾಗಶೇಖರ್ ನಿರ್ದೇಶನದ "ಅಮರ್" ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಪಾಲಿನ ಚೊಚ್ಚಲ ಚಿತ್ರವಾಗಿದ್ದು ಬಿಡುಗಡೆಗೆ ಮುನ್ನವೇ ಭಾರೀ ನಿರೀಕ್ಷೆ ಹುಟ್ಟಿಸಿದೆ.
ದರ್ಶನ್
ದರ್ಶನ್
.ಬೆಂಗಳೂರು: ನಾಗಶೇಖರ್ ನಿರ್ದೇಶನದ "ಅಮರ್" ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಪಾಲಿನ ಚೊಚ್ಚಲ ಚಿತ್ರವಾಗಿದ್ದು ಬಿಡುಗಡೆಗೆ ಮುನ್ನವೇ ಭಾರೀ ನಿರೀಕ್ಷೆ ಹುಟ್ಟಿಸಿದೆ.
ಈ ನಡುವೆ ನಾಗಶೇಖರ್ ಹೇಳಿದಂತೆ  ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ಲಸ್ ಪಾಯಿಂಟ್
ಇದಾಗ್ಯೂ ಚಿತ್ರತಂಡ ದರ್ಶನ್ ಈ ಚಿತ್ರದಲ್ಲಿ ಯಾವ ಬಗೆಯ ಪಾತ್ರ ಮಾಡಲಿದ್ದಾರೆನ್ನುವುದನ್ನು ಬಹಿರಂಗಪಡಿಸಿಲ್ಲ. ಪತ್ರಿಕೆಗೆ ಸಿಕ್ಕ ಮಾಹಿತಿಯ ಪ್ರಕಾರ  ದರ್ಶನ್ "ಅಮರ್" ನಲ್ಲಿ ಕೋಟ್ಯಾಧಿಪತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಕೊಡವ ಹಾಡಾದ "ಜೋರು ಪಾಟ್ಟು" ಬಿಡುಗಡೆಯಾದಾಗಿನಿಂದ ಹೊಸದೊಂದು ಟ್ರೀಂಡ್ ಸೃಷ್ಟಿಸಿದ್ದು ಇದರಲ್ಲಿ ದರ್ಶನ್, ಅಭಿಷೇಕ್, ತಾನ್ಯಾ ಹೋಪ್, ರಚಿತಾ ರಾಮ್ ಸಹ ಅಭಿನಯಿಸುತ್ತಿದ್ದಾರೆ.ಮೇ 31ಕ್ಕೆ ಚಿತ್ರ ತೆರೆಕಾಣಲಿದ್ದು ಇದಾಗಲೇ ದಿನಗಣನೆ ಪ್ರಾರಂಬವಾಗಿದೆ.
ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ಕರ್ನಾಟಕದ 300, ದೇಶಾದ್ಯಂತ 100ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಚಿತ್ರವು ಜುಲೈ  6ರಂದು ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಕ್ಯಾಮರಾಮನ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com